
Party Rounds: ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಮಾತ್ರ, ಸೇರ್ಪಡೆ ಯಾಕಿಲ್ಲ?
ಬಿಜೆಪಿ ಸೇರ್ಪಡೆ ಇಲ್ಲ, ಬರೀ ಬೆಂಬಲ ಅಂತ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸುಮಲತಾ ಹೊಸಹೆಜ್ಜೆಯನ್ನಟ್ಟ ಮಂಡ್ಯ ಸಂಸದೆ ಸುಮಲತಾ ಅಂಬರೀಶ್.
ಮಂಡ್ಯ(ಮಾ.10): ರಾಜ್ಯ ರಾಜಕಾರಣದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಾಣ ನಡೆ ಇಟ್ಟಿದ್ದಾರೆ.. ಹೌದು, ಪಕ್ಷಕ್ಕೆ ಸೇರೋದಕ್ಕೆ ಟೆಕ್ನಿಕಲ್ ರೀಸನ್ ಇದೆ ಅಂತ ಹೇಳುವ ಮೂಲಕ ಬಿಜೆಪಿ ಬರೀ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸೇರ್ಪಡೆ ಇಲ್ಲ, ಬರೀ ಬೆಂಬಲ ಅಂತ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸುಮಲತಾ ಹೊಸಹೆಜ್ಜೆಯನ್ನಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಕುಟುಂಬ ರಾಜಕರಾಣ ಎನ್ನುತ್ತಲೇ ಜೆಡಿಎಸ್ ವಿರುದ್ಧ ಕಿಡಿ ಕಾರಿ, ಪ್ರಧಾನಿ ಮೋದಿಗೆ ಬಹುಪರಾಕ್ ಎಂದಿದ್ದಾರೆ. ನನ್ನ ಪುತ್ರ ಅಭಿಶೇಕ್ ಅಂಬರೀಶ್ ರಾಜಕಾರಣಕ್ಕೆ ಬರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮರಳುತ್ತಿದೆಯಾ ನೆಹರೂ ಕಾಲದ ಮೈಂಡ್ ಸೆಟ್? ಭಾರತ ತೆಗಳಿ ಸೊರೊಸ್ ಮಾತಿಗೆ ತುಪ್ಪ ಸುರಿದ ರಾಹುಲ್!