Asianet Suvarna News Asianet Suvarna News

ಕಾಂಗ್ರೆಸ್‌ ಆಯ್ತು, ಈಗ ಬಿಜೆಪಿಯಲ್ಲಿ ಮುಂದಿನ ಸಿಎಂ ಕೂಗು

ಕಾಂಗ್ರೆಸ್‌ ಆಯ್ತು, ಈಗ ಬಿಜೆಪಿಯಲ್ಲಿ ಮುಂದಿನ ಸಿಎಂ ಕೂಗು ಎದ್ದಿದೆ. ಹೌದು...ದಾವಣಗೆರೆಯಲ್ಲಿ'ಮುಂದಿನ ಸಿಎಂ ವಿಜಯೇಂದ್ರ' ಎಂದು ಬಿಎಸ್​ವೈ ಪುತ್ರನ ಪರ ಅಭಿಮಾನಿಗಳ ಘೋಷಣೆ ಕೂಗಿದರು.

ಹಾಸನ, (ಜೂನ್.08):ಕಾಂಗ್ರೆಸ್‌ ಆಯ್ತು, ಈಗ ಬಿಜೆಪಿಯಲ್ಲಿ ಮುಂದಿನ ಸಿಎಂ ಕೂಗು ಎದ್ದಿದೆ. ಹೌದು...ಹಾಸನದಲ್ಲಿ'ಮುಂದಿನ ಸಿಎಂ ವಿಜಯೇಂದ್ರ' ಎಂದು ಬಿಎಸ್​ವೈ ಪುತ್ರನ ಪರ ಅಭಿಮಾನಿಗಳ ಘೋಷಣೆ ಕೂಗಿದರು.

ಸೈಡ್ ಲೈನ್ ಎನ್ನುವ ಸಿದ್ದು ಹೇಳಿಕೆಗೆ ವಿಜಯೇಂದ್ರ ಸ್ಪರ್ಧೆಯ ತಿರುಗೇಟು ಕೊಟ್ಟ ಬಿಎಸ್‌ವೈ

 ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನದಿಂದ ಇಳಿದ ಬಳಿಕ ಇದೀಗ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ತಂದೆಯ ಪರ್ಯಾಯವಾಗಿ ರಾಜಕೀಯದಲ್ಲಿ ನೆಲೆಕಾಣಲು ಹೋರಾಡುತ್ತಿದ್ದಾರೆ. ಇಂದು(ಗುರುವಾರ) ಹಾಸನ ಭೇಟಿ ನೀಡಿದ್ದ ವೇಳೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು 'ಮುಂದಿನ ಸಿಎಂ ವಿಜಯೇಂದ್ರ' ಎಂದು ಘೋಷಣೆ ಕೂಗಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.