Asianet Suvarna News Asianet Suvarna News

ದಿಢೀರ್ ದೆಹಲಿಗೆ ಹೋದ ಶಶಿಕಲಾ ಸಂಪುಟ ಪುನಾರಚನೆ ಬಗ್ಗೆ ಕೊಟ್ಟ ಬ್ರೇಕಿಂಗ್!

ಸಚಿವ ಸಂಪುಟ ಪುನಾರಚನೆ/ ದಿಢೀರ್ ಎಂದು ದೆಹಲಿಗೆ ದೌಡಾಯಿಸಿದ ಶಶಿಕಲಾ ಜೊಲ್ಲೆ/ ಕೇಂದ್ರದ ಸಚಿವರ ಭೇಟಿಗೆ ಬಂದಿದ್ದೆ ಎಂದ ಶಶಿಕಲಾ/ ನನ್ನನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ

ನವದೆಹಲಿ(ಜು. 29)  ಕರ್ನಾಟಕದಲ್ಲಿ  ಸಂಪುಟ ಪುನಾರಚನೆ ಸುದ್ದಿ ಹೊರಬೀಳುತ್ತಲೇ ರಾಜಕೀಯ ವಲಯದಲ್ಲಿ ತೀವ್ರ ಬೆಳವಣಿಗೆ ನಡೆಯುತ್ತಿದೆ. ಸಚಿವ ಸ್ಥಾನಕ್ಕೆ ಕತ್ತರಿ ಬೀಳಲಿದೆ ಎಂಬ ಮಾತು ಕೇಳಿಬಂದ ತಕ್ಷಣವೇ ಸಚಿವೆ ಶಶಿಕಲಾ ಜೊಲ್ಲೆ ದೆಹಲಿಗೆ ಭೇಟಿ ನೀಡಿದ್ದಾರೆ.

ಇದ್ದಕ್ಕಿದ್ದಂತೆ ದೆಹಲಿಗೆ ಹಾರಿದ ಸವದಿ, ಕಾರಣ ನಿಗೂಢ

ಬಿಜೆಪಿಯ ಹೈಕಮಾಂಡ್ ಭೇಟಿಗೆ ಜೊಲ್ಲೆ ತೆರಳಿದ್ದಾರೆ. ನನ್ನನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶಶಿಕಲಾ ಹೇಳಿದ್ದಾರೆ.