ಸಂಸದ ಪ್ರತಾಪ್ ಸಿಂಹ ಅಸಮಾಧಾನಕ್ಕೆ ನಟ ಶಿವರಾಜ್‌ಕುಮಾರ್ ತಿರುಗೇಟು...

ವರುಣಾದಲ್ಲಿ ಸಿದ್ದರಾಮಯ್ಯ ಪರ ಶಿವರಾಜ್‌ಕುಮಾರ್‌ ಪ್ರಚಾರ ಮಾಡಿದ್ದು, ಇದಕ್ಕೆ ಸಂಸದ ಪ್ರತಾಪ್‌ ಸಿಂಹ ಅಸಮಧಾನ ವ್ಯಕ್ತಪಡಿಸಿದ್ದರು. ಇದಕ್ಕೆ  ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ನಾನೇನು ಚಿಕ್ಕ ಹುಡುಗ ಅಲ್ಲ ನನಗೆ 61 ವರ್ಷ. ನನ್ನ ವಯಸ್ಸಿಗೆ ಮಾರ್ಯಾದೆ ಇದೆ ಎಂದು ಹೇಳಿದರು.

Share this Video
  • FB
  • Linkdin
  • Whatsapp

ವರುಣಾದಲ್ಲಿ ಸಿದ್ದರಾಮಯ್ಯ ಪರ ಶಿವರಾಜ್‌ಕುಮಾರ್‌ ಪ್ರಚಾರ ಮಾಡಿದ್ದು, ಇದಕ್ಕೆ ಸಂಸದ ಪ್ರತಾಪ್‌ ಸಿಂಹ ಅಸಮಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ನಾನೇನು ಚಿಕ್ಕ ಹುಡುಗ ಅಲ್ಲ ನನಗೆ 61 ವರ್ಷ. ನನ್ನ ವಯಸ್ಸಿಗೆ ಮಾರ್ಯಾದೆ ಇದೆ ಎಂದು ಹೇಳಿದರು. ಹಾಗೇ ಸುದೀಪ್ ಕೂಡ ಪ್ರಚಾರಕ್ಕೆ ಹೋಗುತ್ತಿದ್ದಾರೆ ಹಾಗಂತ ನಾಳೆ ಸಿಕ್ಕರೆ ನಾವು ಮಾತಾಡಲ್ವಾ? ಕಿಚ್ಚ ನನ್ನ ಒಳ್ಳೆ ಗೆಳೆಯ. ಇಲ್ಲಿ ವಾರ್‌ ಏನೂ ಇಲ್ಲ ಎಂದು ಹೇಳಿದರು. ಇನ್ನು ನನಗೆ ಮಾತಾನಾಡಲು ಬರಲ್ಲ ಅಂತಲ್ಲ , ಮಾತಾಡೋಕೆ ಇಷ್ಟ ಇಲ್ಲ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅದಲ್ಲದೆ ಪುನೀತ್‌ ಹೆಸರಿನಲ್ಲಿ ಸೇವೆ ಮಾಡಿ ಮಾಡುವವರು ಹೇಳಿಕೊಳ್ಳಲ್ಲ. ನಾವಿಲ್ಲಿ ಯುದ್ದ ಮಾಡಲು ಬಂದಿಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಬೇಕು ಎಂದು ಪ್ರತಾಪ್‌ ಸಿಂಹನಿಗೆ ಟಾಂಗ್‌ ನೀಡಿದರು 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


Related Video