
'ದಾಖಲೆ ಇದ್ರೆ ಬೇಗ ಬಿಡುಗಡೆ ಮಾಡಿದರೆ ಒಳ್ಳೆಯದು'
ಆರ್ ಆರ್ ನಗರದಲ್ಲಿ ಚುನಾವಣೆ ಕಾವು/ ಬಿಜೆಪಿ ವರ್ಸಸ್ ಕಾಂಗ್ರೆಸ್/ ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದ ಮುನಿರತ್ನ/ ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಸವಾಲು
ಬೆಂಗಳೂರು(ಅ. 26) ಆರ್ ಆರ್ ನಗರ ಕಣದಲ್ಲಿ ಆರೋಪ-ಪ್ರತ್ಯಾರೋರ ಜೋರಾಗಿಯೇ ಇದೆ. ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೆಂಡ ಕಾರಿದ್ದಾರೆ.
ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಎಷ್ಟು ಬೇಗ ಬಿಡುಗಡೆ ಮಾಡುತ್ತಾರೋ ಅಷ್ಟೂ ಒಳ್ಳೆಯದು ಎಂದು ಕುಟುಕಿದ್ದಾರೆ.