Asianet Suvarna News Asianet Suvarna News

ಹಿಂದುತ್ವ ನಮ್ಮ ಬದ್ದತೆ ಹಿಂದುತ್ವ ನಮ್ಮ ಭಾಷಣದ ಸರಕಲ್ಲ: ಸುನೀಲ್‌ ಕುಮಾರ್‌

ಹಿಂದುತ್ವ ನಮ್ಮ ಬದ್ದತೆ ಹಿಂದುತ್ವ ನಮ್ಮ ಭಾಷಣದ ಸರಕಲ್ಲ ಹಿಂದುತ್ವದ ಪಾಠವನ್ನು ಯಾರು ಹೇಳುವ ಅಗತ್ಯ ಇಲ್ಲ ಎಂದು ಸುನೀಲ್‌ ಕುಮಾರ್‌ ಹೇಳಿದ್ದಾರೆ
 

ಹಿಂದುತ್ವ ನಮ್ಮ ಬದ್ದತೆ ಹಿಂದುತ್ವ ನಮ್ಮ ಭಾಷಣದ ಸರಕಲ್ಲ ಹಿಂದುತ್ವದ ಪಾಠವನ್ನು ಯಾರು ಹೇಳುವ ಅಗತ್ಯ ಇಲ್ಲ ಎಂದು ಸುನೀಲ್‌ ಕುಮಾರ್‌ ಹೇಳಿದ್ದಾರೆ. ಉಡುಪಿಯಲ್ಲಿ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು  ಪೂರ್ಣ ಬಹುಮತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಅಧಿಕಾರಕ್ಕೆ ಬರುತ್ತೆ.  ಆಡಳಿತದಲ್ಲಿ ಹಿಂದುತ್ವವನ್ನು ಬಿಜೆಪಿ ಸರ್ಕಾರ ತಂದಿದ್ದು, ಗೋ ಹತ್ಯೆ ನಿಷೇಧ , ಲವ್‌ ಜಿಹಾದ್‌ ಮತಾಂತರಕ್ಕೆ ಕಡಿವಾಣ ಹಾಕಿದೆ ಎಂದು ಹೇಳಿದರು.ಅದಲ್ಲದೆ  ಜಾತಿಯಾದಾರದಲ್ಲಿ ಚುನಾವಣೆ ನಡೆಯಲ್ಲ ,ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತ ಕೆಲಸವನ್ನು ಮಾಡಿದ್ದೇನೆ. ಕರಾವಳಿಯ ಜನ ಉಳಿದ ಜಿಲ್ಲೆಗಿಂತ ಬುದ್ದಿವಂತರು ರಾಷ್ಟ್ರೀಯತೆ ಮತ್ತು ಅಭಿವೃದ್ದಿ ಈ ಎರಡು ವಿಷಯವನ್ನು ಇಟ್ಟುಕೊಂಡು ಕರಾವಳಿ ಜನ ನಿರ್ಣಾಯಕ ಪಾತ್ರವನ್ನು ತೆಗೆದುಕೊಂಡಿದೆ  ಎಂದು  ಸುನೀಲ್‌ ಕುಮಾರ್‌ ಹೇಳಿದರು.