ಕಾರ್ಯಕರ್ತರಿಗೆ ಬೈಕ್ ಗಿಫ್ಟ್ ಕೊಟ್ಟ ಗಣಿಧಣಿ: ಪಕ್ಷ ಸಂಘಟನೆಗೆ ಸಿದ್ಧತೆ
ಬಳ್ಳಾರಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರಿದ್ದು, ಮತದಾರರ ಮನಗೆಲ್ಲಲು ಅಭ್ಯರ್ಥಿಗಳಿಂದ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಸೀರೆ ಹಾಗೂ ಕುಕ್ಕರ್ ಹಂಚಿಕೆ ಮಾಡಿದ್ದಾಯ್ತು, ಇದೀಗ ಬೈಕ್ ಸರದಿ ಶುರುವಾಗಿದೆ. ಗಣಿನಾಡಿನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಜೋರಾಗಿದ್ದು, ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಗಣಿಧಣಿ ಜನಾರ್ದನ ರೆಡ್ಡಿ ಕೆ.ಆರ್.ಪಿ.ಪಿ ಪಕ್ಷದ ಸಂಘಟನೆಗಾಗಿ ಕಾರ್ಯಕರ್ತರಿಗೆ ಬೈಕ್ ಗಿಫ್ಟ್ ಮಾಡಿದ್ದಾರೆ. ಗಂಗಾವತಿ ಹಾಗೂ ಬಳ್ಳಾರಿ ಮುಖಂಡರಿಗೆ 100 ಟಿವಿಎಸ್ ಸ್ಪೋಟ್ಸ್ ನೀಡಲಾಗಿದೆ. ಪಕ್ಷದ ಹೆಸರು, ಚಿಹ್ನೆ ಬಳಸಿ ವಿಶೇಷವಾಗಿ ಬೈಕ್ಗಳನ್ನು ಸಿದ್ಧಪಡಿಸಲಾಗಿದೆ.