Asianet Suvarna News Asianet Suvarna News

'ನಾನು ಸಿಎಂ ಆಗಿದ್ದಾಗ ಎಲ್ಲರೂ ನನ್ನ ಕೈ ಕೂಡ ಹೀಗೆ ಎತ್ತಿದ್ರು..' ಮಹಾಘಟಬಂದನ್‌, ಕಾಂಗ್ರೆಸ್‌ಗೆ ಎಚ್‌ಡಿಕೆ ಟೀಕೆ!

ಎಚ್‌ಡಿಕೆ ಅವಕಾಶವಾದಿ ಎಂದ ಕಾಂಗ್ರೆಸ್‌ ನಾಯಕರಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ನಾನು ಸಿಎಂ ಆಗಿದ್ದಾಗ ಎಲ್ಲರೂ ನನ್ನ ಕೈ ಕೂಡ ಹೀಗೆ ಎತ್ತಿದ್ರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
 

First Published Jul 17, 2023, 8:03 PM IST | Last Updated Jul 17, 2023, 8:03 PM IST

ಬೆಂಗಳೂರು (ಜು.17): ಮಹಾಘಟಬಂದನ್‌ ಸಭೆಗೆ ಕುಟುಕಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ನಾನು ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಾಗಲೂ, ಎಲ್ಲರೂ ಇದೇ ರೀತಿಯಲ್ಲಿ ನನ್ನ ಕೈಯನ್ನು ಎತ್ತಿದ್ದರು. ಆಮೇಲೇನಾಯ್ತು ಅಂತಾ ನೋಡಿದ್ರಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಯಾವ ಸಭೆಗೂ ನಮಗೆ ಆಹ್ವಾನ ಬಂದಿಲ್ಲ. ಆಹ್ವಾನ ಕೊಡಿ ಅಂತಾ ಕೇಳೋದೂ ಇಲ್ಲ. ಜೆಡಿಎಸ್‌ ಅನ್ನು ಅವಕಾಶವಾದಿ ಎಂದು ಕಾಂಗ್ರೆಸಿಗರು ಹೇಳುತ್ತಾರೆ. ಆದ್ರೆ, ಇದೇ ಬಿಜೆಪಿಯ ಜೊತೆ ಮಹಾಘಟಬಂಧನದ ನಿತೀಶ್‌ ಕುಮಾರ್‌ ಸರ್ಕಾರ ಮಾಡಿರಲಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ಮೈತ್ರಿಗೆ ನಡುಕು ಹುಟ್ಟಿಸಿದ ಬಿಜೆಪಿ, ಎನ್‌ಡಿಎ ಸಭೆಗೆ 38 ಪಕ್ಷದ ಬೆಂಬಲ!

ಘಟಬಂದನ್‌ದಿಂದ ಏನ್‌ ಸಾಧನೆ ಮಾಡೋಕೆ ಹೊರಟಿದ್ದಾರೆ. ನಾನೇನು ಇವರ ಗುಲಾಮನೇ ಎಂದು ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದಾರೆ. ನನ್ನ ಪಕ್ಷದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿದ್ದಾರೆ. ಅವರ ಅಪ್ಪಣೆ ತಗೊಂಡು ನನ್ನ ಪಕ್ಷದ ತೀರ್ಮಾನ ಮಾಡ್ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.