Asianet Suvarna News Asianet Suvarna News

ಡಿಕೆಶಿ-ಎಚ್‌ಡಿಕೆಯನ್ನು ಮುಜುಗರಕ್ಕೀಡು ಮಾಡಿದ ಸಿ.ಪಿ. ಯೋಗೇಶ್ವರ್..!

ಸಿ.ಪಿ. ಯೋಗೇಶ್ವರ್ ಅವರ ಈ ಹೇಳಿಕೆ ವಿಪಕ್ಷ ನಾಯಕರನ್ನು ಪೇಚಿಗೆ ಸಿಲುಕುವಂತೆ ಮಾಡಿದ್ದು, ತಾವು ಸರ್ಕಾರದಿಂದ ಯಾವುದೇ ಲಾಭವಾಗಲಿ ಅಥವಾ ಪ್ರಯೋಜನವಾಗಲಿ ಪಡೆದುಕೊಳ್ಳುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸುವ ಒತ್ತಡಕ್ಕೆ ಸಿಲುಕಿದೆ.
 

ಬೆಂಗಳೂರು(ಜು.30): ವಿಪಕ್ಷ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತ ಪಕ್ಷವಾದ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಹೇಳುವ ಮೂಲಕ ನೂತನ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಇಬ್ಬರನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಸಿ.ಪಿ. ಯೋಗೇಶ್ವರ್ ಅವರ ಈ ಹೇಳಿಕೆ ವಿಪಕ್ಷ ನಾಯಕರನ್ನು ಪೇಚಿಗೆ ಸಿಲುಕುವಂತೆ ಮಾಡಿದ್ದು, ತಾವು ಸರ್ಕಾರದಿಂದ ಯಾವುದೇ ಲಾಭವಾಗಲಿ ಅಥವಾ ಪ್ರಯೋಜನವಾಗಲಿ ಪಡೆದುಕೊಳ್ಳುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸುವ ಒತ್ತಡಕ್ಕೆ ಸಿಲುಕಿದೆ.

ಕುಮಾರಸ್ವಾಮಿಯಿಂದ ಬಿಜೆಪಿಗೆ ಬೆಂಬಲ: ಯೋಗೇಶ್ವರ್ ಬಾಂಬ್..!

ಕಳೆದೊಂದ ವಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದಾಗಲೆಲ್ಲಾ, ಎಚ್‌ಡಿಕೆ ಸರ್ಕಾರದ ಪರ ಸೌಮ್ಯ ನಿಲುವನ್ನು ತಾಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು. ಹೀಗಾಗಿ ಯೋಗೇಶ್ವರ್ ಮಾತು ಇದಕ್ಕೆ ಪುಷ್ಠಿ ನೀಡಿದಂತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories