ರಕ್ತ ಬಸಿದು ಪಕ್ಷ ಕಟ್ಟಿದ್ದರು ದಣಿವರಿಯದ ದೇವೇಗೌಡರು! ಅಜ್ಜ ಕಟ್ಟಿದ ಪಕ್ಷಕ್ಕೆ ಕಂಟಕ ತಂದಿಟ್ಟನಾ ಮೊಮ್ಮಗ..?

ಅಜ್ಜ ನೆಟ್ಟು ಬೆಳೆಸಿದ ಆಲದ ಮರಕ್ಕೆ ಮೊಮ್ಮಗನಿಂದಲೇ ಕೊಡಲಿ ಪೆಟ್ಟು..!
ಪ್ರಜ್ವಲ್ ಪ್ರಕರಣ ಜೆಡಿಎಸ್‌ಗೆ  ಕಳಂಕವೂ ಹೌದು, ಕಂಟಕವೂ ಹೌದು..!
ಪೆನ್‌ಡ್ರೈವ್ ಬಾಂಬ್ ಬೆಂಕಿ.. ಜೆಡಿಎಸ್ ಕೋಟೆಯಲ್ಲಿ ಜ್ವಾಲಾಮುಖಿ..!
ಜೆಡಿಎಸ್ ತೊರೆಯಲು ತೆರೆಮರೆಯಲ್ಲಿ ಸಿದ್ಧವಾಗ್ತಿದ್ಯಾ ಶಾಸಕರ ದಂಡು..?

Share this Video
  • FB
  • Linkdin
  • Whatsapp

ಆಡಿಸಿ ನೋಡು, ಬೀಳಿಸಿ ನೋಡು..ಇದು ದೇವೇಗೌಡರ(HD Devegowda) ರಾಜಕೀಯ ಚದುರಂಗದಾಟದ ಕಥೆ. ಆ ಚದುರಂಗದಲ್ಲಿ ಜೆಡಿಎಸ್(JDS) ಎದ್ದು-ಬಿದ್ದು ಪುಟಿದೆದ್ದು ನಿಂತ ರೋಚಕ ಕಥೆ. ಜೆಡಿಎಸ್ ಪಕ್ಷಕ್ಕಾಗಿ ದೇವೇಗೌಡರ ಹೋರಾಟ ಎಂಥದ್ದು ಅನ್ನೋದಕ್ಕೆ ಇದೊಂದು ಸಾಕ್ಷಿ ಸಾಕು. ಜೆಡಿಎಸ್.. ಅಂದ್ರೆ ಜಾತ್ಯಾತೀತ ಜನತಾದಳ ಹರದನಹಳ್ಳಿ ದೊಡ್ಡಗೌಡ ದೇವೇಗೌಡರ ಛಲದ ಪ್ರತೀಕ. ದೇವೇಗೌಡ್ರು ಅಂದ್ರೆ ಹೋರಾಟ, ಹೋರಾಟ ಅಂದ್ರೆ ದೇವೇಗೌಡ್ರು. ಹಾಸನ(Hassan) ಜಿಲ್ಲೆಯ ಹೊಳೆನರಸೀಪುರದ ಒಬ್ಬ ಸಾಮಾನ್ಯ ರೈತನ ಮಗ ದೇಶದ ಪ್ರಧಾನಿಯಾಗ್ತಾರೆ, ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅದು ದೇವೇಗೌಡರ ಶಕ್ತಿ ಮತ್ತು ತಾಕತ್ತು. ರಾಜಕೀಯದಲ್ಲಿ ಗೌಡ್ರನ್ನು ಭೀಷ್ಮಾಚಾರ್ಯ, ಚದುರಂಗದ ಚಾಣಕ್ಯ ಅಂತ ಕರೀತಾರೆ. ಛಲ ಅನ್ನೋ ಪದಕ್ಕೆ ಸಮಾನಾಂತರ ಅರ್ಥ ಅಂತ ಏನಾದ್ರೂ ಇದ್ರೆ ಅದು ಎಚ್.ಡಿ ದೇವೇಗೌಡ. ಇಂಥಾ ದೇವೇಗೌಡರು ಕಟ್ಟಿದ ಪಕ್ಷ ಜೆಡಿಎಸ್. ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನದ್ದು(Prajwal Revanna) ಎನ್ನಲಾಗ್ತಿರೋ ಅಶ್ಲೀಲ ವೀಡಿಯೊ ಪ್ರಕರಣ ಪೆಟ್ಟು ಕೊಟ್ಟಿರೋದು ದೇವೇಗೌಡರ ಕುಟುಂಬಕ್ಕಷ್ಟೇ ಅಲ್ಲ, ಜೆಡಿಎಸ್ ಪಕ್ಷಕ್ಕೂ ದೊಡ್ಡ ಕಂಟಕ ಎದುರಾಗಿದೆ. ಈ ಪ್ರಕರಣ ಬೆಳಕಿಗೆ ಬರ್ತಾ ಇದ್ದಂತೆ, ವೀಡಿಯೊ ಬಾಂಬ್ ಸ್ಫೋಟಗೊಳ್ತಾ ಇದ್ದಂತೆ ಗೌಡರ ಮನೆಯಲ್ಲಿ ಬಿರುಗಾಳಿ ಎದ್ದಿದ್ರೆ, ಜೆಡಿಎಸ್ ಕೋಟೆಯೊಳಗೆ ಸುನಾಮಿಯೇ ಎದ್ದು ಬಿಟ್ಟಿದೆ. 

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಗ್ಯಾರಂಟಿಯಿಂದ ಜೋಶಿ ಗೆಲುವು ಕಷ್ಟನಾ? ಮೋದಿ ಬೈತಾರೆ ಆದ್ರೂ ಬಂಡತನದಿಂದ ಬರ್ತೀವಿ!

Related Video