
Halal controversy ಹಿಂದೂಗಳು ಮಟನ್ ಶಾಪ್ ಇಟ್ರೆ ಧನಸಹಾಯ, ರೇಣುಕಾಚಾರ್ಯ ಘೋಷಣೆ!
- ಕರ್ನಾಟಕದಲ್ಲಿ ಹಲಾಲ್ ವಿವಾದ ಬಲು ಜೋರು
- ಹಲಾಲ್ ಉತ್ಪನ್ನ ಬಹಿಷ್ಕರಿಸುವಂತೆ ಅಭಿಯಾನ
- ಹಿಂದೂಗಳು ಮಟನ್ ಶಾಪ್ ಇಟ್ರೆ ಧನಸಹಾಯ
- ಮಹತ್ವದ ಘೋಷಣೆ ಮಾಡಿದ ಶಾಸಕ ರೇಣುಕಾಚಾರ್ಯ
ಬೆಂಗಳೂರು(ಮಾ.30): ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಶಾಸಕ ಎಂಪಿ ರೇಣುಕಾಚಾರ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಹಿಂದೂಗಳು ಮಾಂಸದ ಅಂಗಡಿ ಇಟ್ಟರೆ ನಾನೇ ಸ್ವತಃ ಧನಸಹಾಯ ಮಾಡುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ. ಹಿಂದೂಗಳು ಎಲ್ಲಾ ವ್ಯಾಪಾರ ಮಾಡಬೇಕು. ನಮಗೆ ಹಲಾಲ್ ಉತ್ಪನ್ನ ಬೇಡ ಎಂದು ರೇಣುಕಾಚಾರ್ಯ ಘೋಷಿಸಿದ್ದಾರೆ.