Asianet Suvarna News Asianet Suvarna News

News Hour Special: ಸಿದ್ದರಾಮೋತ್ಸವ ಹಿಂದಿನ ಉದ್ದೇಶ ಬಿಚ್ಚಿಟ್ಟ ಎಚ್‌ಸಿ ಮಹದೇವಪ್ಪ

ಈ ವಾರದ ನ್ಯೂಸ್ ಅವರ್ ಚರ್ಚಾ ಕಾರ್ಯಕ್ರಮಕ್ಕೆ ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಹೆಚ್‌ ಸಿ ಮಹದೇವಪ್ಪ ಆಗಮಿಸಿದ್ದರು. ಆಗಸ್ಟ್ 03 ರಕ್ಕೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಯೋಜಿಸಲು ಉದ್ದೇಶಿಸಲಾಗಿದೆ. ಇದು ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಎನ್ನಲಾಗುತ್ತಿದೆ.

ಈ ವಾರದ ನ್ಯೂಸ್ ಅವರ್ ಚರ್ಚಾ (News Hour) ಕಾರ್ಯಕ್ರಮಕ್ಕೆ ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಹೆಚ್‌ ಸಿ ಮಹದೇವಪ್ಪ (HC Mahadevappa) ಆಗಮಿಸಿದ್ದರು. ಆಗಸ್ಟ್ 03 ರಕ್ಕೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಯೋಜಿಸಲು ಉದ್ದೇಶಿಸಲಾಗಿದೆ. ಇದು ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಎನ್ನಲಾಗುತ್ತಿದೆ.

ಒಕ್ಕಲಿಗರ ಕಾರ್ಯಕ್ರಮದಲ್ಲಿ ಸಿಎಂ ಆಗುವ ಆಸೆ ಬಿಚ್ಚಿಟ್ಟ ಡಿಕೆಶಿಗೆ ಎಚ್‌ಡಿಕೆ ಡಿಚ್ಚಿ

ಜೊತೆಗೆ 2023 ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. ಹೀಗಾಗಿ ಸಿದ್ದರಾಮೋತ್ಸವ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮೋತ್ಸವ ಯಶಸ್ಸಿಗಾಗಿ ಅವರ ಬೆಂಬಲಿಗರು ಪಣ ತೊಟ್ಟಿದ್ದಾರೆ. ಸಿದ್ದರಾಮಯ್ಯ ಹೆಸರನ್ನು ಹೇಳಿದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ದಡ ಮುಟ್ಟುತ್ತದೆ ಎಂದು ಹೈಕಮಾಂಡ್‌ಗೂ ಸಂದೇಶ ನೀಡವುದು ಇದರ ಉದ್ದೇಶವಾಗಿದೆ. ಈ ಬಗ್ಗೆ ಮಾಜಿ ಸಚಿವ ಹೆಚ್‌ ಸಿ ಮಹದೇವಪ್ಪ ಮಾತನಾಡಿದ್ದಾರೆ.