Asianet Suvarna News Asianet Suvarna News

ಕುಮಾರಸ್ವಾಮಿ ಬಾಂಬ್‌ಗೆ ಕಾಂಗ್ರೆಸ್‌ ಕೊತಕೊತ..!

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಿ ಮನೆಗೂ ಹೋಗಿಲ್ಲ, ಏರ್‌ಪೋರ್ಟ್‌ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

First Published Aug 4, 2023, 10:11 PM IST | Last Updated Aug 4, 2023, 10:11 PM IST

ಬೆಂಗಳೂರು(ಆ.04): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಿ ಮನೆಗೂ ಹೋಗಿಲ್ಲ, ಏರ್‌ಪೋರ್ಟ್‌ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು, ಗೃಹ ಇಲಾಖೆಯಲ್ಲಿ ಎಗ್ಗಿಲ್ಲದೆ ವರ್ಗಾವಣೆ ನಡೆಯುತ್ತಿದೆ ಅಂತ ಕಿಡಿ ಕಾರಿದ್ದಾರೆ. ಗರುಡಾ ಮಾಲ್‌ ಬಳಿಯ ಪೊಲೀಸ್‌ ಮೆಸ್‌ನಲ್ಲಿ ಸಭೆ ನಡೆದಿದೆ. ಸಿಎಂ, ಗೃಹ ಸಚಿವರ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರು ಯಾಕೆ ಸಭೆಯಲ್ಲಿ ಇದ್ದರು ಅಂತ ಪ್ರಶ್ನಿಸಿದ್ದಾರೆ. ವರ್ಗಾವಣೆ ಮಾಡಿ ಅದನ್ನ ಮತ್ತೆ ವಾಪಸ್‌ ತೆಗೆದುಕೊಂಡ್ರು ಅಂತ ಹರಿಹಾಯ್ದಿದ್ದಾರೆ. ಕುಮಾರಸ್ವಾಮಿ ವೈಎಸ್‌ಟಿ ಬಾಂಬ್‌ಗೆ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. 

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಘಟಿಕೋತ್ಸವ, ಕಣ್ಣೀರು ಹಾಕಿದ ಡಾ.ವಂದನಾ ಹೆತ್ತವರು!

Video Top Stories