Asianet Suvarna News Asianet Suvarna News

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ರಾಜ್ಯದಲ್ಲಿ 60 ವರ್ಷ ರಾಜಕೀಯ ಪಕ್ಷ ಕಟ್ಟಿ ಬೆಳೆಸಿದ ದೇವೇಗೌಡರನ್ನ ಸೆಕ್ಯೂಲರ್‌.. ಸೆಕ್ಯೂಲರ್‌ ಅಂತ ಹೇಳಿ ಕುತ್ತಿಗೆ ಕುಯ್ದಿರಲ್ರೀ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರು (ಜು.06): ಸದನದಲ್ಲಿ ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದೀಯಾ ಎಂದು ಶೇಕ್‌ ಹ್ಯಾಂಡ್‌ ಬೇರೆ ಕೊಡ್ತಾರೆ. ನಾವು ರಾಜಕಾರಣವನ್ನು ನೋಡಿದ್ದೇವೆ. ಹುಸಿನಗೆ ಆಟಗಳು ನಮ್ಮ ಮುಂದೆ ನಡೆಯಲ್ಲ. ಜೀವನದಲ್ಲಿ ಎಂದಿಗೂ ನಿಮ್ಮ ಮುಲಾಜಿನಲ್ಲಿ ನಾನು ಬರಲಿಲ್ಲ. ನಿಮಗೆ ಕೇರ್‌ ಮಾಡೊಲ್ಲ.

ನಮ್ಮಲ್ಲಿ ಬೆಳೆದಂತವರನ್ನು ಕರೆದುಕೊಂಡು, ತಿಂದು - ಉಂಡು ಹೋದವರನ್ನ ಇಟ್ಕೊಂಡು ನಮಗೇ ಮಾತಾಡ್ತಿದೀರಾ. ನಿಮ್ಮನ್ನ ನಂಬಿದ ದೇವೇಗೌಡರ ಕುತ್ತಿಗೆ ಕುಯ್ದಿರಲ್ರೀ.. ಸೆಕ್ಯೂಲರ್‌.. ಸೆಕ್ಯೂಲರ್‌ ಅಂತ ಹೇಳಿ 60 ವರ್ಷ ರಾಜಕೀಯ ಪಕ್ಷ ಕಟ್ಟಿ ಬೆಳೆಸಿದ ದೇವೇಗೌಡರ ಕುತ್ತಿಗೆ ಕುಯ್ದಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೀವು ನಮಗೆ ಕೇರ್‌ ಮಾಡಿಲ್ಲಾಂದ್ರೆ ನಾವು ನಿಮಗೆ ಕೇರ್‌ ಮಾಡೊಲ್ಲ. ಯಾರ್ರೀ ಹೆದರಿಕೊಳ್ತಾರೆ ನಿಮ್ಗೆ.. ಕೆಲಸಕ್ಕೆ ಬಾರದಿದ್ದನ್ನ ಮಾತಾಡ್ತೀರಲ್ರೀ. ನೀವು ಕೇರ್‌ ಮಾಡಿಲ್ಲಾಂದ್ರೆ.. ನಿಮ್ಮ ಅಪ್ಪರಂತೆ ಕೇರ್‌ ಮಾಡೋದಿಲ್ಲ ನಾವು.. ಇವರು ಕೇರ್‌ ಮಾಡದಿದ್ರೆ ಹೆದರಿಕೊಂಡು ಬಿಡ್ತೀವಾ ನಾವು.. ನಾನು ಮಾತಾಡ್ತೀನಿ ಎಂದು ತಿರುಗೇಟು ನೀಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಕೆಲ ನಿಮಿಷಗಳ ಕಾಲ ಮಾತಿನ ಜಟಾಪಟಿ ನಡೆಯಿತು.