Asianet Suvarna News Asianet Suvarna News

ಕುರಿ ಕಾಯುತ್ತಿದ್ದ ಹುಡುಗ ಸಿಎಂ ಆಗಿದ್ದು ಹೇಗೆ?: ನೀವು ಕಂಡಿರದ ಕೇಳಿರದ ಸಿದ್ದು ಜೀವನ ಚರಿತ್ರೆ!

ವಿಪಕ್ಷ ನಾಯಕ ಸಿದ್ದರಾಮಯ್ಯನವರು 75 ನೇ ವರ್ಷಕ್ಕೆ ಕಾಲಿಟ್ಟಿದ್ದು,  ದಾವಣಗೆರೆಯಲ್ಲಿ ಅದ್ಧೂರಿಯಾಗಿ ಸಿದ್ದರಾಮೋತ್ಸವ ನಡೆದಿದೆ. ನಾಡಿನ ಮೂಲೆ ಮೂಲೆಯಿಂದ ಅಭಿಮಾನಿಗಳು, ಕಾರ್ಯಕರ್ತರು ದಾವಣಗೆರೆಗೆ ಆಗಮಿಸಿ ಸಿದ್ದರಾಮೋತ್ಸವವನ್ನು ಇನ್ನಷ್ಟು ಸಾರ್ಥಕಗೊಳಿಸಿದರು. 

ವಿಪಕ್ಷ ನಾಯಕ ಸಿದ್ದರಾಮಯ್ಯನವರು 75 ನೇ ವರ್ಷಕ್ಕೆ ಕಾಲಿಟ್ಟಿದ್ದು,  ದಾವಣಗೆರೆಯಲ್ಲಿ (Davanagere) ಅದ್ಧೂರಿಯಾಗಿ ಸಿದ್ದರಾಮೋತ್ಸವ (Siddaramothsav) ನಡೆದಿದೆ. ನಾಡಿನ ಮೂಲೆ ಮೂಲೆಯಿಂದ ಅಭಿಮಾನಿಗಳು, ಕಾರ್ಯಕರ್ತರು ದಾವಣಗೆರೆಗೆ ಆಗಮಿಸಿ ಸಿದ್ದರಾಮೋತ್ಸವವನ್ನು ಇನ್ನಷ್ಟು ಸಾರ್ಥಕಗೊಳಿಸಿದರು. 

ಸಿದ್ದರಾಮೋತ್ಸವ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ, ಚುನಾವಣೆ ಗೆಲ್ಲುವ ಸ್ಟ್ರಾಟಜಿನಾ..?

ಮುಂದಿನ ಮುಖ್ಯಮಂತ್ರಿ ಹುದ್ದೆ ಪೈಪೋಟಿ ತೀವ್ರವಾಗಿರುವ ಕಾಂಗ್ರೆಸ್‌ನ ಒಳ ರಾಜಕಾರಣದ ನಿಜ ಸ್ವರೂಪವೇನು? ಅದು ಉಲ್ಬಣಗೊಳ್ಳುತ್ತದೆಯೋ ಅಥವಾ ಶಮನಗೊಂಡು ಅಧಿಕಾರ ಗದ್ದುಗೆಗೇರುವ ಒಗ್ಗಟ್ಟಿನ ಪ್ರಯತ್ನ ನಡೆಸಲು ನಾಯಕರು ಸಜ್ಜಾಗುವರೆ ಎಂಬ ಯಕ್ಷಪ್ರಶ್ನೆಗೆ ಈ ಕಾರ್ಯಕ್ರಮ ಉತ್ತರ ನೀಡಲಿದೆ. 

ಸಿದ್ದರಾಮಯ್ಯನವರದ್ದು ಸುಮಾರು 40 ವರ್ಷಗಳ ರಾಜಕೀಯ ಜೀವನ. ರಾಜ್ಯ ರಾಜಕಾರಣದ ದೊಡ್ಡ ನಾಯಕ, ಖಡಕ್ ರಾಜಕಾರಣಿ, ಹಿಂದುಳಿದ ವರ್ಗದವರ ನಾಯಕ, ಸಿಎಂ ಆಗಿ ನೋಡಿದ್ದೇವೆ. ಅವರ ಜೀವನ ಮೇಲ್ನೋಟಕ್ಕೆ ಕಂಡಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರ ರಾಜಕೀಯ ಜೀವನದ ಬಗ್ಗೆ ಕಂಡು ಕೇಳರಿಯದ ಜೀವನ ಚರಿತ್ರೆ!

Video Top Stories