News Hour: ಹೊರಗೆ ಸಿದ್ದರಾಮಯ್ಯಗೆ ಬೆಂಬಲ, ಒಳಗೊಳಗೆ CM ಕುರ್ಚಿಗೆ ಹಂಬಲ

ಕಾಂಗ್ರೆಸ್‌ ಪಾಳಯದಲ್ಲಿ ಸಿಎಂ ಕುರ್ಚಿ ಕಾಳಗ ಜೋರಾಗಿದೆ. ಹೊರಗೆ ಸಿದ್ದರಾಮಯ್ಯಗೆ ಬೆಂಬಲ ನೀಡುತ್ತಿದ್ದರೆ, ಒಳಗೊಳಗೆ ಸಿಎಂ ಕುರ್ಚಿಯ ಹಂಬಲಕ್ಕೆ ಬಿದ್ದಿರುವುದು ಕಾಣಿಸಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.9): ಕಾಂಗ್ರೆಸ್​ ಪಾಳಯದಲ್ಲಿ ಸಿಎಂ ಕುರ್ಚಿ ಕಾಳಗ ಮತ್ತಷ್ಟು ಜೋರಾಗಿದೆ. ಹೊರಗೆ ಸಿದ್ದರಾಮಯ್ಯಗೆ ಬೆಂಬಲ ನೀಡುತ್ತಿರುವವರೆ ಒಳಗೊಳಗೆ CM ಕುರ್ಚಿ ಹಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್​ನಲ್ಲಿ ಹಿರಿಯ ನಾಯಕರಿಗೆ ಅಧಿಕಾರದ ಕನಸು ಇನ್ನೂ ನಿಲ್ಲುತ್ತಿಲ್ಲ.

ಸಿಎಂಗೆ ಕಾನೂನು ಹಿನ್ನಡೆಯಾದ್ರೆ ಈಗಿನಿಂದಲೇ ನಾಯಕರ ರಣತಂತ್ರ ರಚನೆ ಆಗುತ್ತಿದೆ. ಸಿಎಂ ಕುರ್ಚಿ ಇಲ್ಲ ಎಂದು ಮಾಧ್ಯಮಗಳ ಎದುರು ಹೇಳಿದ್ರೂ, ಸಿಎಂ ಕುರ್ಚಿಗಾಗಿ ಸರ್ಕಸ್ ಮಾತ್ರ ನಿಲ್ಲುತ್ತಿಲ್ಲ ದೇಶಪಾಂಡೆ.. ಎಂಬಿ ಪಾಟೀಲ್​, ದರ್ಶನಾಪುರ, ರಾಯರೆಡ್ಡಿ ಸೇರಿದಂತೆ ಹಲವರು ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಜ್ಜೆ ಹೆಜ್ಜೆಯಲ್ಲೂ ಸಿಕ್ಕಿಬಿದ್ದ 'ಗಜ'ಪತಿ, ಗರ್ವಭಂಗಕ್ಕೆ ಸಾಕಾ ಇಷ್ಟು ಚಿತ್ರಗಳು!

ಸಿಎಂ ಬದಲಾವಣೆ ಪ್ರಸ್ತಾವನೆ ಹೈಕಮಾಂಡ್ ಎದುರು ಇಲ್ಲ. ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪ ನಮಗೂ ಗೊತ್ತಾಗುತ್ತಿತ್ತಲ್ವಾ.. ? ಎಂ.ಬಿ ಪಾಟೀಲ್ ಹೇಳಿದ್ದೇ ಬೇರೆ, ಮಾಧ್ಯಮ ಅರ್ಥೈಸಿಕೊಂಡಿದ್ದೇ ಬೇರೆ. ಸಿಎಂ ಬದಲಾವಣೆ ಚರ್ಚೆ ಕೇವಲ ಮಾಧ್ಯಮಗಳಿಗಷ್ಟೇ ಸೀಮಿತ ಎಂದು ಸಚಿವ ಪ್ರಿಯಾಂಗ್‌ ಖರ್ಗೆ ಹೇಳಿದ್ದಾರೆ.

Related Video