
ಕಾಂಗ್ರೆಸ್ ಸೇರ್ತಿದ್ದಂತೆ ಜಗದೀಶ್ ಶೆಟ್ಟರ್ಗೆ ದೊಡ್ಡ ಜವಾಬ್ದಾರಿ, ಲಿಂಗಾಯತ ಮತಬೇಟೆಗೆ ಮೆಗಾ ಪ್ಲಾನ್!
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬೇಟೆಗೆ ಕೈ ಹೊಸ ಪ್ಲಾನ್ ಮಾಡ್ತಿದ್ದು, ಶೆಟ್ಟರ್ ಮುಂದಿಟ್ಟು ಲಿಂಗಾಯತ ಕಾರ್ಡ್ ಬಳಕೆಗೆ ರಣತಂತ್ರ ಹೂಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್ ನೀಡಲು ಕಾಂಗ್ರೆಸ್ ಲಿಂಗಾಯತ ಕಾರ್ಡ್ ಬಳಕೆ ಮಾಡುತ್ತಿದೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ಗೆ ಕೈ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಲಿಂಗಾಯತ ಮತಬೇಟೆಗೆ ಕಾಂಗ್ರೆಸ್ ಪ್ಲಾನ್ ಮಾಡ್ತಿದ್ದು, ಈ ಹಿನ್ನೆಲೆ ಶೆಟ್ಟರ್ಗೆ ಬಿಗ್ ಟಾಸ್ಕ್ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬೇಟೆಗೆ ಕೈ ಹೊಸ ಪ್ಲಾನ್ ಮಾಡ್ತಿದ್ದು, ಶೆಟ್ಟರ್ ಮುಂದಿಟ್ಟು ಲಿಂಗಾಯತ ಕಾರ್ಡ್ ಬಳಕೆಗೆ ರಣತಂತ್ರ ಹೂಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್ ನೀಡಲು ಕಾಂಗ್ರೆಸ್ ಲಿಂಗಾಯತ ಕಾರ್ಡ್ ಬಳಕೆ ಮಾಡುತ್ತಿದೆ. 14 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಶೆಟ್ಟರ್ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
Add Asianetnews Kannada as a Preferred Source
