Asianet Suvarna News Asianet Suvarna News

14 ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಕೇಸ್‌ನಿಂದ ಪಾರಾದ್ರಾ ಸಿದ್ದರಾಮಯ್ಯ? ಹಾಗಾದ್ರೆ ಮುಡಾ ಕಥೆ ಏನು?

ಸಿಎಂ ಸಿದ್ದರಾಮಯ್ಯ.. 4 ದಶಮಾನದ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಅಂತ ಹೇಳ್ಕೊಳ್ತಿದ್ದ ದಿಟ್ಟರಾಮಯ್ಯ.. ಆದ್ರೆ ಈಗ ನೋಡಿದ್ರೆ, ಹೆಜ್ಜೆ ಹೆಜ್ಜೆಗೂ ಕಂಟಕ.. ದಿನದಿನವೂ ಅಪಾಯ ಎದುರಾಗ್ತಾ ಇದೆ. ಈಗ ವಿಚಿತ್ರ ಲೆಕ್ಕಾಚಾರ ಒಂದರಿಂದ ಮತ್ತೆ ಸೆನ್ಸೇಷನ್ ಸೃಷ್ಟಿಸಿದ್ದಾರೆ.. ಆ ರಾಜಕೀಯದ ವಿಚಿತ್ರ ಕಥಾನಕ ಇಲ್ಲಿದೆ ನೋಡಿ.

First Published Oct 2, 2024, 7:55 PM IST | Last Updated Oct 2, 2024, 7:55 PM IST

ರಾಜ್ಯದ ಜನರನ್ನೀಗ ಒಂದಷ್ಟು ಪ್ರಶ್ನೆಗಳು ಕಾಡ್ತಿದ್ದಾವೆ. ಸಿದ್ದರಾಮಯ್ಯನೋರ ರಾಜಕೀಯ ಬದುಕಿಗೆ ತೊಡರುಕೊಟ್ಟಿದ್ದೇ ಆ 14 ಸೈಟುಗಳು. ಅವನ್ನೇ ಈಗ, ತೃಣಕ್ಕೆ ಸಮಾನ ಅಂತ ಹೇಳ್ತಾ, ಪಾರ್ವತಿ ಅವರು ವಾಪಾಸ್ ಕೊಟ್ಟಿದಾರೆ.. ಹಾಗಾದ್ರೆ, ಇದರಿಂದ ಸಿದ್ದರಾಮಯ್ಯನೋರನ್ನ ಕವಿದಿದ್ದ ಆರೋಪದ ಕಾರ್ಮೋಡ ಕರಗುತ್ತಾ? ಅವರ ವಿರುದ್ಧ ಸಿದ್ಧವಾಗಿದ್ದ ಎಫ್ಐಆರ್ ರದ್ದಾಗುತ್ತಾ..? ಖೇಸ್ ಖಲ್ಲಾಸ್ ಆಗುತ್ತಾ?