Asianet Suvarna News Asianet Suvarna News

ರಾಜ್ಯಪಾಲರಿಗೆ ಸಚಿವರ ಪಟ್ಟಿ ನೀಡಿದ ಸಿಎಂ ; ಸಂಭಾವ್ಯರ ಹೆಸರುಗಳಿವು..!

ತೀವ್ರ ಕುತೂಹಲ ಮೂಡಿಸಿದ್ದ ಸಂಪುಟ ವಿಸ್ತರಣೆ ಜ. 13 ರ ಸಂಜೆ  ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. 

ಬೆಂಗಳೂರು (ಜ. 12): ತೀವ್ರ ಕುತೂಹಲ ಮೂಡಿಸಿದ್ದ ಸಂಪುಟ ವಿಸ್ತರಣೆ ಜ. 13 ರ ಸಂಜೆ  ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. 

ರಾಜಾಹುಲಿ ಸಿಎಂ ಪಟ್ಟ ಗಟ್ಟಿ ಮಾಡಿಕೊಂಡಿದ್ಹೇಗೆ.?

7 ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಬ್ಬರು ಸಚಿವರ ರಾಜಿನಾಮೆ ಪಡೆಯುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗುತ್ತಿದೆ. ಪಕ್ಷೇತರ ಶಾಸಕರಾಗಿ, ಅಬಕಾರಿ ಸಚಿವರಾಗಿರುವ ಆರ್ ನಾಗೇಶ್‌ರನ್ನು ಕೈ ಬಿಡುವ ಸಂಭವವಿದೆ. ಸಂಪುಟಕ್ಕೆ ಯಾರು ಸೇರ್ಪಡೆಯಾಗಬಹುದು, ಯಾರು ಔಟ್ ಆಗಬಹುದು ಎಂಬ ಸ್ಪಷ್ಟ ಚಿತ್ರಣ ಹೊರಬೀಳಬೇಕಿದೆ. 
 

Video Top Stories