ಮೇ 10 ರಂದು ಮಹಾ ಕದನ: ಕೇಸರಿ ಪಾಳಯ ಸಂಪೂರ್ಣ ಸಿದ್ಧ ಎಂದ ಸಿಎಂ

ಹಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 

Share this Video
  • FB
  • Linkdin
  • Whatsapp

 ಹಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸಿ ಎಂ ಬೊಮ್ಮಾಯಿ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಮಾತನಾಡಿದ್ದು , ಭಾರತೀಯ ಜನತಾ ಪಕ್ಷ ಅತೀ ಹೆಚ್ಚು ಮೆಂಬರ್ಸ್‌ ಇರುವ ಪಕ್ಷ, ನಿರಂತರವಾಗಿ ಪಕ್ಷದ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು. ಹಾಗೇ ಹಲವಾರು ಅಭಿಯಾನವನ್ನು ಜತೆ ವಿಜಯ ಸಂಕಲ್ಪ ಯಾತ್ರೆ, ನಾಲ್ಕು ದಿಕ್ಕಿನಿಂದ ರಥ ಯಾತ್ರೆ ಎಲ್ಲಾ ಮೋರ್ಚ ಸಮ್ಮೇಳನಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಬಿಜೆಪಿ ಚುನಾವಣೆ ಎದುರಿಸಲು ಎಲ್ಲ ತಯಾರಿ ಮಾಡಿಕೊಂಡಿದೆ. ಕೇಂದ್ರ ರಾಜ್ಯಕ್ಕೆ ಕೊಟ್ಟಿರುವಂತ ಹತ್ತು ಹಲವಾರು ಯೋಜನೆಗಳನ್ನು ಕೊಟ್ಟಿದೆ. ಬಿಜೆಪಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು .ಸಾಮಾಜಿಕವಾಗಿ ಆರ್ಥಿಕವಾಗಿ ತೆಗೆದುಕೊಂಡಿರುವ ನಿರ್ಧಾರ ಜನರಿಗೆ ಸಹಾಯವಾಗಿದೆ ಮತದಾರರ ಭಾರತೀಯ ಜನತಾ ಪಕ್ಷ ಜೊತೆ ಇದ್ದಾರೆ ಎಂದು ಸಿ ಎಂ ತಿಳಿಸಿದರು.

Related Video