
CM Bommai: ನಾಡಿನ ಅಭಿವೃದ್ಧಿ ಜೊತೆಗೆ ಸ್ವಕ್ಷೇತ್ರದ ಅಭಿವೃದ್ಧಿ: ಹಾವೇರಿಯನ್ನು ಹೈಟೆಕ್ ಜಿಲ್ಲೆ ಮಾಡಲು ಬೊಮ್ಮಾಯಿ ಪಣ
ಸಿಎಂ ಬಸವರಾಜ ಬೊಮ್ಮಾಯಿ. ತವರಿನ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದು, ಹಾವೇರಿಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ.
ರಾಜ್ಯದ ಹೃದಯಭಾಗ ಎಂದು ಹೆಸರಾಗಿರುವ ಜಿಲ್ಲೆ ಹಾವೇರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕಿಯ ಕರ್ಮ ಭೂಮಿ. ಹಾವೇರಿ ಜನರಿಂದ ಆಯ್ಕೆಯಾಗಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ ಬೊಮ್ಮಾಯಿ. ನಾಡಿನ ಅಭಿವೃದ್ಧಿ ಜೊತೆಗೆ ಸ್ವಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇಡೀ ಜಿಲ್ಲೆಯ ಹೈಟೆಕ್ ಜಿಲ್ಲೆ ಮಾಡುವುದ ಜತೆ ಮಾದರಿ ಜಿಲ್ಲೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ತಮ್ಮ ಅವಧಿಯಲ್ಲಿ ಜಿಲ್ಲೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ತಮ್ಮ ತವರು ಜಿಲ್ಲೆಯ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ