ಜೈಲಿನಲ್ಲಿ ಚೈತ್ರಾ ಕುಂದಾಪುರ ಹೊಸ ನಾಟಕ, 5 ಕೋಟಿ ರೂ ಸಾಗಿಸಲು ಮಾಡಿದ್ದ ಪ್ಲಾನ್ ರಣರೋಚಕ!

ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಇಂಚಿಂಚು ಮಾಹಿತಿ ಬಹಿರಂಗವಾಗುತ್ತಿದೆ. ಉದ್ಯಮಿಯಿಂದ ಹಣ ಪಡೆಯಲು ಮಾಡಿದ್ದ ಪ್ಲಾನ್‌ಗಿಂತ ಅದನ್ನು ಸಾಗಿಸಲು ಮಾಡಿದ ಪ್ಲಾನ್ ಮತ್ತಷ್ಟು ರಣರೋಚಕ. ಈ ಕುರಿತು ಸಂಪೂರ್ಣ ವಿವರ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ.

First Published Sep 16, 2023, 10:52 PM IST | Last Updated Sep 16, 2023, 10:54 PM IST

ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಡಿ ಚೈತ್ರಾ ಕುಂದಾಪುರ ಇದೀಗ ಅರೆಸ್ಟ್ ಆಗಿದ್ದಾರೆ.  ಇದೀಗ ಆರೋಗ್ಯ ನೆಪ ಒಡ್ಡಿ ಆಸ್ಪತ್ರೆ ಸೇರಿರುವ ಚೈತ್ರಾ ಕುಂದಾಪುರ ಮೇಲಿನ ತನಿಖೆ ಚುರುಕಾಗಿದೆ. ಉದ್ಯಮಿಯಿಂದ 5 ಕೋಟಿ ರೂಪಾಯಿ ಪಡೆದು ಅದನ್ನು ಸಾಗಿಸಲು ಚೈತ್ರಾ ಗ್ಯಾಂಗ್ ಅತೀ ದೊಡ್ಡ ಪ್ಲಾನ್ ಮಾಡಿತ್ತು. 3 ಬ್ಯಾಗ್‌ನಲ್ಲಿ ತಲಾ ಒಂದೊಂದು ಕೋಟಿ ರೂಪಾಯಿ ತಂದ ಉದ್ಯಮಿ ಕಡೆಯವರಿಗೆ 10 ರೂಪಾಯಿ ಹರಿದ ನೋಟು ಹಿಡಿದ ವ್ಯಕ್ತಿಗೆ ಹಣ ತಲುಪಿಸಲು ಸೂಚನೆ ನೀಡಲಾಗಿತ್ತ. ಈ ಕುರಿತು ಆಡಿಯೋ ಒಂದು ಬಯಲಾಗಿದೆ.