ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?

ರಾಜ್ಯದಲ್ಲಿ ಮತ್ತೆ ಬಿಜೆಪಿ ದಿಗ್ವಿಜಯದ ಸುಳಿವು ನೀಡಿದ ಎಕ್ಸಿಟ್ ಪೋಲ್..!
ಎಲ್ಲಾ ಮತಗಟ್ಟೆ ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಿಂಗಲ್ ಡಿಜಿಟ್..!
ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿಲ್ವಾ "ಪಂಚ ಗ್ಯಾರಂಟಿ" ಪಂಚ್..?
ವಿಧಾನಸಭಾ ಸೋಲಿಗೆ ಲೋಕಸಭೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾ ಬಿಜೆಪಿ..?

Share this Video
  • FB
  • Linkdin
  • Whatsapp

ಚುನಾವಣೆಗೂ ಮುಂಚೆ ಕರ್ನಾಟಕದ ರಣಕಲಿಗಳು ನುಡಿದಿದ್ದ ಭವಿಷ್ಯವಿದು. 28ರಲ್ಲಿ 20ಸ್ಥಾನಗಳನ್ನು ಗೆಲ್ಲೇದಾಗಿ ಜೋಡೆತ್ತುಗಳು ಶಪಥ ಮಾಡಿದ್ದಾರೆ. 28ಕ್ಕೆ 28ರಲ್ಲೂ ಗೆಲ್ಲೋದು ನಾವೇ ಅಂತ ವಿಜಯೇಂದ್ರ ಪ್ರತಿಜ್ಞೆ. 23 ಸ್ಥಾನಗಳಲ್ಲಿ ನಾವು ಗೆಲ್ಲೋದು ಶತಸಿದ್ಧ ಅನ್ನೋ ರಾಜಾಹುಲಿ ಪ್ರತಿಜ್ಞೆ. ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಡೆದ ಚುನಾವಣೆ. ಭಾರತದ ಮುಂದಿನ ಪ್ರಧಾನಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ಚುನಾವಣೆ. ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರ್ತಾರಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗೋದು ಇಲ್ಲೇ. ಸಿದ್ದರಾಮಯ್ಯ(Siddaramaiah)-ಡಿಕೆ ಶಿವಕುಮಾರ್ ಜೋಡಿ ನಾಯಕತ್ವದ ಕಾಂಗ್ರೆಸ್ ಪಕ್ಷ, ಮತ್ತೊಂದ್ಕಡೆ ಯಡಿಯೂರಪ್ಪ-ವಿಜಯೇಂದ್ರ-ಕುಮಾರಸ್ವಾಮಿ ನೇತೃತ್ವದ ಬಿಜೆಪಿ(BJP)-ಜೆಡಿಎಸ್(JDS) ಮೈತ್ರಿಕೂಟ. ಅಧಿಕಾರದಲ್ಲಿರೋ ಕಾಂಗ್ರೆಸ್(Congress) ಪಕ್ಷಕ್ಕೆ ವಿಧಾನಸಭಾ ಚುನಾವಣೆಯ ಪ್ರಚಂಡ ಗೆಲುವನ್ನು ಲೋಕಸಭಾ ಚುನಾವಣೆಯಲ್ಲೂ(Lok Sabha elections 2024) ಮುಂದುವರಿಸೋ ವಿಶ್ವಾಸ. ಅದಕ್ಕಾಗಿ ಪಂಚ ಗ್ಯಾರಂಟಿಗಳನ್ನೇ ಅಸ್ತ್ರವಾಗಿ, ಗುರಾಣಿಯಾಗಿ ಹಿಡಿದುಕೊಂಡು ರಣರಂಗಕ್ಕೆ ಧುಮುಕಿತ್ತು ಕಾಂಗ್ರೆಸ್ ಮಹಾಸೇನೆ. ಕಾಂಗ್ರೆಸ್ ಪಕ್ಷದ ನಾಗಾಲೋಟಕ್ಕೆ ಬ್ರೇಕ್ ಹಾಕಲೆಂದೇ ರಾಜ್ಯದಲ್ಲಿ ಎದ್ದು ನಿಂತದ್ದು ಕಮಲದಳ ಮೈತ್ರಿವ್ಯೂಹ. ತ್ರಿಕೋನ ಸ್ಪರ್ಧೆಯಾದ್ರೆ ಕೈ ಪಾಳೆಯದ ದಿಗ್ವಿಜಯ ಖಚಿತ ಅನ್ನೋ ಸತ್ಯವನ್ನು ಅರಿತುಕೊಂಡಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಪರಸ್ಪರ ಕೈ ಜೋಡಿಸಿ ರಣರಂಗದ ಚದುರಂಗದಲ್ಲಿ ಜೋಡಿ ದಾಳ, ದೋಸ್ತಿ ದಾಳವನ್ನು ಉರುಳಿಸಿ ಬಿಟ್ಟಿದ್ರು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಭವಿಷ್ಯ ನುಡಿದ ಕಾಲ ಭೈರವೇಶ್ವರನ ಶ್ವಾನ: ಮೋದಿ, ರಾಹುಲ್ ಗಾಂಧಿ ಪೋಟೊದಲ್ಲಿ ಸೆಲೆಕ್ಟ್ ಮಾಡಿದ್ದು ಯಾರನ್ನು?

Related Video