
Karnataka Politics: ಚುನಾವಣೆ ಹೊತ್ತಲ್ಲೇ ಬಿಲ್ಲವ ಸಮುದಾಯ ಶಕ್ತಿ ಪ್ರದರ್ಶನ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರಲ್ಲೇ ಬಿಲ್ಲವ ಸಮಾಜದ ಆಕ್ರೋಶ
ಮಂಗಳೂರು(ನ.02): ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಮುದಾಯದ ಮೀಸಲಾತಿ ಬಿಸಿತುಪ್ಪವಾಗಿದೆ. ಹೌದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರಲ್ಲೇ ಬಿಲ್ಲವ ಸಮಾಜದ ಆಕ್ರೋಶ ಕೇಳಿಬರುತ್ತಿದೆ. ಕರಾವಳಿಯಲ್ಲಿ ಮೀಸಲಾತಿ ಹೆಸರಲ್ಲಿ ಬಿಲ್ಲವರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಪ್ರವರ್ಗ 1 ರ ಹೆಸರಿನಲ್ಲಿ ಮತ್ತೆ ಬಿಲ್ಲವರು ಕಾರ್ಯಕ್ರಮವೊಂದನ್ನ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಈಡಿಗ, ಬಿಲ್ಲವ ಸಮುದಾಯದವರು ಸುಮಾರಿ 75 ಲಕ್ಷದಷ್ಟು ಜನರಿದ್ದಾರೆ. ನಾರಾಯಣಗುರುಗಳ ಹೆಸರಿಲ್ಲಿ ನಿಗಮ ಸ್ಥಾಪನೆಗೂ ಒತ್ತಾಯಿಸಿದ್ದಾರೆ. ಜನಾರ್ದನ ಪೂಜಾರಿ ಮುಂದಾಳತ್ವದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪುನೀತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಮಳೆ, 30 ವರ್ಷದ ಹಿಂದೆ ಅಣ್ಣವ್ರಿಗೂ ವರುಣನ ಆಶೀರ್ವಾದ!