Asianet Suvarna News Asianet Suvarna News

CD ಬಾಂಬ್ ಹಾಕಿ ಅಬ್ಬರಿಸಿ ಬೊಬ್ಬಿರಿದಿದ್ದ ಯತ್ನಾಳ್ ಇಂದು ಸೈಲೆಂಟ್..!

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅತೃಪ್ತ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಿಡಿ ಬಾಂಬ್ ಸಿಡಿಸಿದ್ದರು. ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಇಡೀ ಅಬ್ಬರಿಸಿ, ಬೊಬ್ಬಿರಿದಿದ್ದ ಯತ್ನಾಳ್ ಸಾಹೇಬ್ರು ಇಂದು ಸೈಲೆಂಟ್ ಆಗಿದ್ದಾರೆ. 

ಬೆಂಗಳೂರು (ಜ. 15): ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅತೃಪ್ತ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಿಡಿ ಬಾಂಬ್ ಸಿಡಿಸಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಿ.ಡಿ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ಕೆಲವರು ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದು, ಆ ಸಿ.ಡಿ. ಸಂಕ್ರಾಂತಿ ನಂತರ ಸಿಡಿಯಬಹುದು ಎಂದು ಹೇಳಿಕೆ ನೀಡಿದ್ದರು. ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಇಡೀ ಅಬ್ಬರಿಸಿ, ಬೊಬ್ಬಿರಿದಿದ್ದ ಯತ್ನಾಳ್ ಸಾಹೇಬ್ರು ಇಂದು ಸೈಲೆಂಟ್ ಆಗಿದ್ದಾರೆ. ನಾಳೆ ರಾಜ್ಯಕ್ಕೆ ಅಮಿತ್ ಶಾ ಹಾಗೂ ಉಸ್ತುವಾರಿ ಅರುಣ್ ಸಿಂಗ್ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಸೈಲೆಂಟ್ ಆಗಿರಬಹುದು ಎನ್ನಲಾಗಿದೆ. 

ಹೊಸ ಸಂಪುಟ: ಯಡಿಯೂರಪ್ಪಗೆ ತಂದೊಡ್ಡಿದ ಹೊಸ ಸಂಕಟ..?

Video Top Stories