
ಹೊಸಪೇಟೆ: ಆನಂದ್ ಸಿಂಗ್ಗೆ ಡಬಲ್ ಶಾಕ್; ಏಕಾಂಗಿಯಾದ್ರಾ ಮೈನಿಂಗ್ ಲಾರ್ಡ್?
ಹೊಸಪೇಟೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ ಏಕಾಂಗಿ; ಯಡಿಯೂರಪ್ಪ ಆದೇಶವಿದ್ದರೂ ತಲೆಹಾಕದ ಜಿಲ್ಲಾ ನಾಯಕರು; ಬಿಜೆಪಿಗೆ ಮುಳುವಾಗುತ್ತಾ ಭಿನ್ನಮತ? ಚುನಾವಣೆಗೆ ಕ್ಷಣಗಣನೆ, ಬಿಜೆಪಿಯಲ್ಲಿ ಆತಂಕ
ಬಳ್ಳಾರಿ (ನ.30): ಉಪಚುನಾವಣೆಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿಯಿವೆ. ಮೊದಲೇ ಬಂಡಾಯದ ಬಿಸಿ ಇರುವ ಹೊಸಪೇಟೆಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ಗೆ ಮತ್ತೊಂದು ಹಿನ್ನಡೆಯಾಗಿದೆ. ಸಹಜವಾಗಿ ಇದು ಕಮಲ ಪಾಳೆಯದಲ್ಲಿ ಆತಂಕ ಹುಟ್ಟುಹಾಕಿದೆ.
Add Asianetnews Kannada as a Preferred Source

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ.