ಶಾ ಬರಮಾಡಿಕೊಳ್ಳಲು ಬಿಜೆಪಿ ತಯಾರಿ, ಕ್ಷೇತ್ರ ಫೈನಲ್ ಮಾಡಲು ಸಿದ್ದು ಕೋಲಾರ ಸವಾರಿ!

ಮೀಸಲಾತಿ ಕುರಿತು ಸಿಎಂ ಬೊಮ್ಮಾಯಿಗೆ ಎಚ್ಚರಿಕೆ, ಡಿ.29ಕ್ಕೆ ಬೆಂಗಳೂರಿಗೆ ಅಮಿತ್ ಶಾ ಆಗಮನ, ವಾಣಿಜ್ಯ ತೆರಿಗೆ ಇಲಾಖೆ ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ, ವಿಧಾನಸಭೆಯಲ್ಲಿ ಕುಕ್ಕರ್ ಪ್ರಸ್ತಾಪ, ಬಿಜೆಪಿ ಕಾಂಗ್ರೆಸ್ ಜಟಾಪಟಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸಿಕೊಳ್ಳುತ್ತಿರುವ ಬಿಜೆಪಿಯಲ್ಲಿ ಹೊಸ ಉತ್ಸಾಹ ತುಂಬಿದೆ. ಕಾರಣ ಡಿಸೆಂಬರ್ 29 ರಂದು ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭೇಟಿಯಾಗುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಇದೀಗ ಅಸಮಾಧಾನಿತರ ಆಕ್ರೋಶ ಹೆಚ್ಚಾಗುತ್ತಿದೆ. ಮಂತ್ರಿಗಿರಿ ಮಾಡಿಲ್ಲ ಅನ್ನೋ ಅಸಮಾಧಾನ ಹೆಚ್ಚಾಗುತ್ತಿದೆ. ಬಿಜೆಪಿಯ ಅಸಮಾಧಾನಿತರ ಪಟ್ಟಿ ಬೆಳೆಯುತ್ತಿದೆ. ಇತ್ತ ಸಿದ್ದರಾಮಯ್ಯ ಕ್ಷೇತ್ರ ಯಾವುದು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ವರುಣಾ ಅಥವಾ ಕೋಲಾರ ಎರಡರಲ್ಲೂ ಯಾವುದೂ ಫೈನಲ್ ಆಗಿಲ್ಲ. ಇತ್ತ ಕೋಲಾರದಲ್ಲಿ ವರ್ತೂರು ಪ್ರಕಾಶ್ ಬಹಿರಂಗ ಸವಾಲು ಹಾಕಿದ್ದಾರೆ.

Related Video