
Today Horoscope: ಈ ದಿನ ಸಿಂಹ ರಾಶಿಯವರಿಗೆ ಲಾಭದಾಯಕವಾಗಿದ್ದು, ಕೊಂಚ ಹಣಕಾಸಿನ ತೊಂದರೆ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಶನಿವಾರ, ದಶಮಿ ತಿಥಿ, ಆರಿದ್ರಾ ನಕ್ಷತ್ರ.
Add Asianetnews Kannada as a Preferred Source

ಶ್ರಾವಣ ಮಾಸದ ಕೊನೆ ಶನಿವಾರ ಇದಾಗಿದೆ. ಇದು ಅತ್ಯಂತ ಪವಿತ್ರವಾದ ದಿನವಾಗಿದೆ. ಹಾಗಾಗಿ ಈ ದಿನ ವಿಷ್ಣು ಮತ್ತು ಶಿವನ ಆರಾಧನೆ ಮಾಡಿ. ಸಿಂಹ ರಾಶಿಯವರಿಗೆ ಈ ದಿನ ಲಾಭದಾಯಕವಾಗಿದೆ. ಸ್ತ್ರೀಯರಿಗೆ ಸೌಖ್ಯ ಇರಲಿದ್ದು, ಹಿರಿಯರ ಸಲಹೆ ಪಡೆಯಿರಿ. ಇಂದು ಕೊಂಚ ಹಣಕಾಸಿನ ತೊಂದರೆಯಾಗಬಹುದು. ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: News Hour: ಕಾಂಗ್ರೆಸ್ ಕುದುರೆ ಕಟ್ಟಿಹಾಕಲು ಮೈತ್ರಿ ಹಗ್ಗ ಹಿಡಿದು ಬಂದ ಬಿಜೆಪಿ-ಜೆಡಿಎಸ್