
Today Horoscope: ಮಿಥುನ ರಾಶಿಯವರಿಗೆ ಈ ದಿನ ಶತ್ರುಭಾದೆ ಕಾಡಲಿದೆ..ಹಣಕಾಸಿನಲ್ಲಿ ಅನುಕೂಲ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಅಶ್ವನಿ ನಕ್ಷತ್ರ.
Add Asianetnews Kannada as a Preferred Source

ಮಂಗಳವಾರ ಹಾಗೂ ಅಶ್ವಿನಿ ನಕ್ಷತ್ರ ಇದ್ದರೇ, ಇದನ್ನು ಅಮೃತಸಿದ್ಧಿ ಯೋಗ ಎಂದು ಕರೆಯಲಾಗುತ್ತದೆ. ವೃಷಭ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಸಹಾಯ. ಶ್ರಮಜೀವಿಗಳಿಗೆ ಲಾಭವಾಗಲಿದೆ. ಸ್ತ್ರೀಯರಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ. ಉಮಾಮಹೇಶ್ವರನ ಪ್ರಾರ್ಥನೆ ಮಾಡಿ. ಇನ್ನೂ ಮಿಥುನ ರಾಶಿಯವರಿಗೆ ಶತ್ರುಭಾದೆ ಸಾಧ್ಯತೆ. ವೃತ್ತಿಯಲ್ಲಿ ಲಾಭವಿದ್ದು, ಹಣಕಾಸು ಅನುಕೂಲವಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಸ್ವಂದನಾ to ಅಪ್ಪು, ಫಿಟ್ ಇದ್ದರೂ ಕಿರಿಯ ವಯಸ್ಸಿನಲ್ಲೇ ಹೃದಯಾಘಾತ ಆತಂಕ ಯಾಕೆ?