Asianet Suvarna News Asianet Suvarna News

Panchanga: ಇಂದು ಅಮೃತಸಿದ್ಧಿ ಯೋಗ, ಕೃಷ್ಣ ಸ್ಮರಣೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಶನಿವಾರ, ನವಮಿ ತಿಥಿ, ರೋಹಿಣಿ ನಕ್ಷತ್ರ.

First Published Aug 20, 2022, 9:17 AM IST | Last Updated Aug 20, 2022, 9:16 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಶನಿವಾರ, ನವಮಿ ತಿಥಿ, ರೋಹಿಣಿ ನಕ್ಷತ್ರ. ಕೃಷ್ಣ ಜನಿಸಿದ್ದು ರೋಹಿಣಿ ನಕ್ಷತ್ರದಲ್ಲಾದ ಕಾರಣ ಇಂದು ಕೂಡಾ ಬಹಳಷ್ಟು ಜನ ಜನ್ಮಾಷ್ಟಮಿ ಆಚರಿಸುತ್ತಾರೆ. ರೋಹಿಣಿ ನಕ್ಷತ್ರ ಶನಿವಾರ ಬಂದಿದ್ದರಿಂದ ಇಂದು ಅಮೃತ ಸಿದ್ಧಿ ಯೋಗ ಕೂಡಾ ಇದೆ. ಜೊತೆಗೆ ಶ್ರಾವಣ ಶನಿವಾರದ ಶುಭ ದಿನ. ಹಾಗಾಗಿ ಈ ದಿನ ಬಹಳ ಶುಭವಾಗಿದೆ.

ಚಾಣಕ್ಯ ನೀತಿ: ಇವರನ್ನು ಕಾಲಿನಿಂದ ಸ್ಪರ್ಶಿಸಿದ್ರೆ ದುರಾದೃಷ್ಟವಂತರು ನೀವಾಗ್ತೀರಿ

ಇದರೊಂದಿಗೆ ಬುಧ ಸಂಕ್ರಮಣ ಕೂಡಾ ಇಂದು ನಡೆಯಲಿದೆ. ಇಂಥ ಶುಭವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ನೋಡೋಣ..