
Today Horoscope: ಇಂದು ಈ ರಾಶಿಯವರಿಗೆ ಉದರ ಸಮಸ್ಯೆ ಕಾಡಲಿದ್ದು, ಲಲಿತಾ ಪ್ರಾರ್ಥನೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ,ಶರದ್ ಋತು,ಕಾರ್ತಿಕ ಮಾಸ,ಕೃಷ್ಣ ಪಕ್ಷ, ಮಂಗಳವಾರ, ಅಷ್ಟಮಿ ತಿಥಿ, ಪೂರ್ವಾಫಾಲ್ಗುಣಿ ನಕ್ಷತ್ರ.
Add Asianetnews Kannada as a Preferred Source

ಮಂಗಳವಾರ ಅಷ್ಟಮಿ ಬಂದಿದ್ದು, ಲಲಿತಾ ಪ್ರಾರ್ಥನೆಗೆ ತುಂಬಾ ಉತ್ತಮವಾದ ಕಾಲವಾಗಿದೆ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಲಾಭವಿದೆ. ಧಾನ್ಯ ವ್ಯಾಪಾರಿಗಳಿಗೆ ಲಾಭಕರವಾದ ದಿನವಾಗಿದೆ. ಹಾಲು-ಹೈನುಗಾರರಿಗೆ ಅನುಕೂಲ. ಜಲ ಸಂಬಂಧಿ ವ್ಯಾಪಾರದಲ್ಲಿ ಲಾಭ. ವ್ಯಾಪಾರದಲ್ಲಿ ಹೊಸ ಪ್ರಯತ್ನ. ದುರ್ಗಾ ಪರಮೇಶ್ವರೀ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲವಿದ್ದು, ಸಹೋದ್ಯೋಗಿಗಳ ಸಹಕಾರ. ಹೊಸ ಅವಕಾಶ ಸಾಧ್ಯತೆ. ಉದರ ಸಮಸ್ಯೆಗಳ ಬಾಧೆ. ಸುಬ್ರಹ್ಮಣ್ಯ ಸ್ವಾಮಿಗೆ ಉದ್ದು ದಾನ ಮಾಡಿ.
ಇದನ್ನೂ ವೀಕ್ಷಿಸಿ: ಪಂಚ ರಾಜ್ಯದಲ್ಲಿ ಸಿಎಂ ಆಯ್ಕೆ ಕಸರತ್ತು, ತೆಲಂಗಾಣದಲ್ಲಿ ಕಗ್ಗಂಟು!