
ಚಾಂಪಿಯನ್ ಸಾಕ್ಷಿ ಮಲಿಕ್ ಕುಸ್ತಿಗೇ ಗುಡ್ಬೈ, ಕಣ್ಣೀರಿನ ಹಿಂದಿದೆಯಾ ರಾಜಕಾರಣ?
ದೇಶದಲ್ಲಿ ಮತ್ತೆ ಕುಸ್ತಿಪಟುಗಳು ಹಾಗೂ ಕುಸ್ತಿ ಫೆಡರೇಶನ್, ಸರ್ಕಾರದ ವಿರುದ್ದ ಪ್ರತಿಭಟನೆ, ಆಕ್ರೋಶ ಹೆಚ್ಚಾಗಿದೆ. ಬ್ರಿಷ್ ಭೂಷಣ್ ಆಪ್ತನೇ ಕುಸ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಕೆರಳಿಸಿದೆ. ಇದರಿಂದ ಚಾಂಪಿಯನ್ ಸಾಕ್ಷಿ ಮಲಿಕ್ ಕಣ್ಣೀರಿಟ್ಟು ವಿದಾಯ ಹೇಳಿದ್ದಾರೆ.
ನವದೆಹಲಿ(ಡಿ.23) ಒಲಿಂಪಿಕ್ ಚಾಂಪಿಯನ್ ಸಾಕ್ಷಿ ಮಲಿಕ್ ಕಣ್ಣೀರಿಟ್ಟು ಕುಸ್ತಿಗೆ ವಿದಾಯ ಹೇಳಿದ್ದಾರೆ. ಕುಸ್ತಿಪಟುಗಳ ಹೋರಾಟ ಈಗ ಇನ್ನೊಂದು ಹಂತಕ್ಕೆ ಬಂದು ನಿಂತಿದೆ..ಕ್ರೀಡಾಪಟುಗಳ ದಿಟ್ಟ ಹೋರಾಟ ಒಂದು ಕಡೆ.. ರಾಜಕಾರಣಿಯ ಗಟ್ಟಿತನ ಇನ್ನೊಂದು ಕಡೆ ನಿಂತಿದೆ. ಬ್ರಿಜ್ ಭೂಷಣ್ ಆಪ್ತನಿಗೆ ಪಟ್ಟ ಕಟ್ಟಿದ್ದಕ್ಕೂ, ಪದಕ ಗೆದ್ದವರು ಕುಸ್ತಿಗೇ ವಿದಾಯ ಹೇಳಿದ್ದಕ್ಕೂ ಏನು ಸಂಬಂಧ..? ಇದರ ಹಿಂದಿರೋ ಅಸಲಿ ಕಥಾನಕ ಇಲ್ಲಿದೆ ನೋಡಿ..
Add Asianetnews Kannada as a Preferred Source
