‘ಆ ಮನುಷ್ಯ ಬಫೂನ್, ಅವನ ಕೈಯಲ್ಲಿ ಏನೂ ಆಗಲ್ಲ’
ದೇವೇಗೌಡ್ರ ಸೋಲಿಗೆ ಗಂಗೆ ಶಾಪ ಕಾರಣವೆಂದ ತುಮಕೂರು ಸಂಸದ ಜಿ.ಎಸ್. ಬಸವರಾಜು; ಆ ಮನುಷ್ಯ ಒಬ್ಬ ಬಫೂನ್ ಎಂದು ಹರಿಹಾಯ್ದ ಸಚಿವ ಎಸ್.ಆರ್. ಶ್ರೀನಿವಾಸ್
ತುಮಕೂರು (ಜು.02): ದೇವೇಗೌಡ್ರ ಸೋಲಿಗೆ ಗಂಗೆ ಶಾಪ ಕಾರಣವೆಂದ ತುಮಕೂರು ಸಂಸದ ಜಿ.ಎಸ್. ಬಸವರಾಜುಗೆ ಸಚಿವ ಎಸ್.ಆರ್.ಶ್ರೀನಿವಾಸ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀನಿವಾಸ್, ಬಸವರಾಜು ಒಬ್ಬ ಬಫೂನ್, ಆ ಮನುಷ್ಯನ ಕೈಯಲ್ಲಿ ಏನೂ ಕೆಲಸ ಸಾಧ್ಯವಿಲ್ಲ ಎಂದು ಹರಿಹಾಯ್ದರು