
ಉಡ ನುಂಗಲು ಪ್ರಯತ್ನಿಸಿ ಪರದಾಡಿದ ಕಾಳಿಂಗ ಸರ್ಪ
ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಪ್ರಯತ್ನಿಸಿ, ಪರದಾಡಿದ ಘಟನೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆಯಲ್ಲಿ ನಡೆದಿದೆ.
12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಮತ್ತು ಉಡ ಒಂದಕ್ಕೊಂದು ಮುಖಾಮುಖಿಯಾಗಿದ್ದು, ಈ ವೇಳೆ ಕಾಳಿಂಗ ಉಡವನ್ನು ನುಂಗಲು ಪ್ರಯತ್ನಿಸಿದೆ. ಆದರೆ ಉಡದ ಗಾತ್ರ ದೊಡ್ಡದಿರುವುದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲು ಸಾಧ್ಯವಾಗಿಲ್ಲವಾಗಿದ್ದು, ಅದು ಪರದಾಡಿದೆ. ಹೀಗಾಗಿ ಉರಗ ರಕ್ಷಕ ಅಶೋಕ ಕುಮಾರ್ ಲಾಯಿಲ್ಗೆ ಮಾಹಿತಿ ನೀಡಲಾಗಿದ್ದು,ಸ್ಥಳಕ್ಕಾಗಮಿಸಿ ಸಾಹಸಪಟ್ಟು ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Gujarat Election ತರೂರ್, ಶರ್ಮಾ ಸೇರಿ ಪ್ರಮುಖರನ್ನು ಹೊರಗಿಟ್ಟ ಕಾಂಗ್ರೆಸ್