
14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?
ಡಾಕ್ಟರ್ ರಾಜ್ಕುಮಾರ್ಗೆ ಫೆವರಿಟ್ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್ ಕುಮಾರ್ ಹಾಗು ದೈತ್ಯ ಖಳನಟ ಸುಧೀರ್ ಸ್ನೇಹ ಗಟ್ಟಿ ಮಾಡಿತ್ತು.
ಡಾ ರಾಜ್ ಕುಮಾರ್ ಬದುಕಿನ ಕತೆಗಳನ್ನ ಎಷ್ಟು ಭಾರಿ ಕೇಳಿದ್ರು ಸಾಕೆನ್ನಿಸಲ್ಲ. ಕೋಳಿ ಸಾರು ಪ್ರೀಯರಾಗಿದ್ದ ಅಣ್ಣಾವ್ರು ಕೂಲಿ ಆಳುಗಳ ಗುಡಿಸಲಿನಲ್ಲಿ ಕೋಳಿ ಸಾರು ಸವಿದದ್ದು, ಖಳನಟ ಸುಧೀರ್ ಮನೆ ಕಾಯಿಹಾಲು ಕೋಳಿ ಸಾರನ್ನ ಚಪ್ಪರಿಸಿದ್ದು ಮರೆಯಲು ಸಾಧ್ಯಾನಾ..? ಇದೀಗ ಇದೇ ಕೋಳಿ ಸಾರು ಅಣ್ಣಾವ್ರ ಹಿರಿ ಮಗ ಹಾಗು ಸುಧೀರ್ ಕಿರಿ ಮಗನ ಸಿನಿಮಾಕ್ಕೆ ವೇದಿಕೆ ಸೃಷ್ಟಿಸಿದೆ. ಹಾಗಾದ್ರೆ ಶಿವಣ್ಣ-ತರುಣ್ ಕಾಂಬಿನೇಷನ್ನಲ್ಲಿ ಅದ್ಯಾವಾಗ ಸಿನಿಮಾ ಬರುತ್ತಿದೆ ನೋಡೋಣ ಬನ್ನಿ..
ಕೋಳಿ ಸಾರು.. ಡಾಕ್ಟರ್ ರಾಜ್ಕುಮಾರ್ಗೆ ಫೆವರಿಟ್ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್ ಕುಮಾರ್ ಹಾಗು ದೈತ್ಯ ಖಳನಟ ಸುಧೀರ್ ಸ್ನೇಹ ಗಟ್ಟಿ ಮಾಡಿತ್ತು. ಸುಧೀರ್ ಪತ್ನಿ ಮಾಲತಿ ಸುಧೀರ್ ಮಾಡುತ್ತಿದ್ದ ಕಾಯಿಹಾಲಿನ ಕೋಳಿ ಸಾರನ್ನ ಅಣ್ಣಾವ್ರು ಚಪ್ಪರಿಸಿ ತಿನ್ನುತ್ತಿದ್ರು..
ಶಿವರಾಜ್ ಕುಮಾರ್ಗೆ ಆಕ್ಷನ್ ಕಟ್ ಹೇಳೋ ಆಸೆ ಎಲ್ಲಾ ನಿರ್ದೇಶಕರಲ್ಲೂ ಇರುತ್ತೆ. ಹಾಗ್ ನೋಡಿದ್ರೆ ಶಿವಣ್ಣ ತರುಣ್ ಕಾಂಬಿನೇಷನ್ನಲ್ಲಿ 14 ವರ್ಷದ ಹಿಂದೆಯೇ ಸಿನಿಮಾ ಬರಬೇಕಿತ್ತು. ಶಿವರಾಜ್ ಕುಮಾರ್ರ ಚೆಲುವೆಯೇ ನಿನ್ನ ನೋಡಲು ಸಿನಿಮಾ ಬಂದಾಗ ಆ ಸಿನಿಮಾದಲ್ಲಿ ತರುಣ್ ಕೂಡ ನಟಿಸಿದ್ರು. ಆಗ್ಲೆ ಶಿವಣ್ಣನಿಗೆ ಕತೆ ಹೇಳಿ ಒಪ್ಪಿಸಿದ್ರು ತರುಣ್. ಆದ್ರೆ ಅದು ಸಾದ್ಯ ಆಗ್ಲಿಲ್ಲ. ಈಗ ತರುಣ್ ನಿರ್ಮಾಣದ ಏಳುಮಲೆ ಸಿನಿಮಾ ಟೈಟಲ್ ಅನೌನ್ಸ್ಗೆ ಬಂದಿದ್ದ ಶಿವಣ್ಣ ಇಬ್ಬರ ಕಾಂಬಿನೇಷನ್ನಲ್ಲಿ ಬೇಗಾ ಸಿನಿಮಾ ಮಾಡೋಣ ಎಂದಿದ್ದಾರೆ. ಈ ಜೋಡಿ ಯಾವಾಗ ಒಂದಾಗುತ್ತೆ ಅನ್ನೋ ಕುತೂಹಲದ ಕಣ್ಣು ಇಬ್ಬರ ಮೇಲಿವೆ..
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...