Asianet Suvarna News Asianet Suvarna News

ಅಪ್ಪು ಅಭಿಮಾನಿಗಳಿಗೆ ಅನ್ನಸಂತರ್ಪಣೆ, ಭಾವುಕರಾದ ರಾಜ್ ಕುಟುಂಬ, ಮರುಗಿದ ಅಭಿಮಾನಿ ಸಮೂಹ

ಅಭಿಮಾನಿಗಳಿಗೆ ಊಟ ಹಾಕಿಸಬೇಕೆಂಬುದು ಪುನೀತ್ ಅವರ ಕನಸಾಗಿತ್ತು. ಆ ಆಸೆಯನ್ನು ಡಾ. ರಾಜ್ ಕುಟುಂಬ ಈಡೇರಿಸಿದೆ. ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಪುಣ್ಯ ತಿಥಿಯ ಅಂಗವಾಗಿ ರಾಜ್‌ಕುಮಾರ್‌ ಕುಟುಂಬ ಅನ್ನ ಸಂತರ್ಪಣೆ ನಡೆಸಿದೆ. 

ಬೆಂಗಳೂರು (ನ. 10): ಅಭಿಮಾನಿಗಳಿಗೆ ಊಟ ಹಾಕಿಸಬೇಕೆಂಬುದು ಪುನೀತ್ ಅವರ ಕನಸಾಗಿತ್ತು. ಆ ಆಸೆಯನ್ನು ಡಾ. ರಾಜ್ ಕುಟುಂಬ ಈಡೇರಿಸಿದೆ. ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಪುಣ್ಯ ತಿಥಿಯ ಅಂಗವಾಗಿ ರಾಜ್‌ಕುಮಾರ್‌ ಕುಟುಂಬ ಅನ್ನ ಸಂತರ್ಪಣೆ ನಡೆಸಿದೆ. ರಾಜ್ಯ ನಾನಾ ಭಾಗಗಳಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಂಡಿದ್ದರು.

ಪಾಯಸ, ಚಿಕನ್ ಚಾಪ್ಸ್, ಕಬಾಬ್, ಘೀ ರೈಸ್: ಕಣ್ಣೀರು ಹಾಕುತ್ತಲೇ ಊಟ ಸವಿದ ಅಪ್ಪು ಅಭಿಮಾನಿಗಳು

ಏಕಕಾಲಕ್ಕೆ ಸುಮಾರು ಐದು ಸಾವಿರ ಮಂದಿ ಊಟ ಮಾಡುವ ಹಾಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಘೀ ರೈಸ್‌, ಅನ್ನ, ಸಾಂಬರ್‌, ಅಕ್ಕಿ ಪಾಯಸ, ವಡೆ, ಚಿಕನ್‌ ಕಬಾಬ್‌, ಮಸಾಲಾ ರೈಸ್‌ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗಿತ್ತು. ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು. ಎಲ್ಲರನ್ನೂ ನಿಯಂತ್ರಿಸಲು ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.