
ಆನಂದ್ ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್ ಗುರೂಜಿಯೇ ಈ ಗ್ಯಾಂಗ್ ಮಾಡಿದ್ದ ಡೀಲ್ ಕಹನಿಯನ್ನ ಹೇಳಿದ್ದಾರೆ.
ಅವರು ಖ್ಯಾತ ಜ್ಯೋತಿಷಿ, ವಾಸ್ತು ಶಿಲ್ಪಿ... ಬೆಳಗ್ಗೆ ಆಗ್ತಿದ್ದಂತೆ ಖಾಸಗಿ ಚಾನಲ್ನಲ್ಲಿ ಬಂದು ತಮ್ಮ ಫಾಲೋವರ್ಸ್ ಮತ್ತು ಭಕ್ತರಿಗೆ ಸಲಹೆಗಳನ್ನ ಮತ್ತು ಸೂಚನೆಗಳನ್ನ ಕೊಡುತ್ತಿದ್ದವರು. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಮಾತುಗಳನ್ನೇ ವೇದವಾಖ್ಯವನ್ನಾಗಿ ಮಾಡಿಕೊಂಡು ಅವರು ಹೇಳಿದಂತೆ ಕೇಳುವ ಭಕ್ತರಿದ್ದಾರೆ. ಆದ್ರೆ ಇವತ್ತು ಇದೇ ಗುರೂಜಿ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾರೆ. ನನಗೆ ಮೋಸವಾಗಿದೆ. ನನ್ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ನನ್ನ ವಿಡಿಯೋ ಇದೆ ಅಂತ ಹೆದರಿಸುತ್ತಿದ್ದಾರೆ ಅಂತ ಕಂಪ್ಲೆಂಟ್ ದಾಖಲಿಸಿದ್ದಾರೆ. ಹಾಗಾದ್ರೆ ಬ್ಲ್ಯಾಕ್ಮೇಲ್ ಬಲೆಗೆ ಬಿದ್ದಿರುವ ಆ ಖ್ಯಾತ ಗುರೂಜಿ ಯಾರು? ಅವರಿಗೆ ಬೆದರಿಕೆಗಳನ್ನ ಹಾಕುತ್ತಿರುವವರು ಯಾರು..? ಇಡೀ ರಾಜ್ಯವೇ ಬೆಚ್ಚಿ ಬೀಳೋ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.
ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್ ಗುರೂಜಿಯೇ ಈ ಗ್ಯಾಂಗ್ ಮಾಡಿದ್ದ ಡೀಲ್ ಕಹನಿಯನ್ನ ಹೇಳಿದ್ದಾರೆ. ಅದೊಂದು ಗ್ಯಾಂಗ್ ತನ್ನ ಪಾಡಿಗಿದ್ದ ಗುರೂಜಿಯನ್ನ ಅಡ್ಡಗಟ್ಟಿ ನಿನ್ನ ಸಿಡಿ ನನ್ನ ಬಳಿ ಇದೆ. ಡೀಲ್ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್ ಆಗುತ್ತೆ ಅಂತ ಹೆಳಿದ್ದರಂತೆ. ಅಷ್ಟೇ ಅಲ್ಲ ಗುರೂಜಿಯ ಆಶ್ರಮದ ಜಾಗದ ಬಗ್ಗೆಯೂ ಮಾತನ್ನಾಡಿದ್ರಂತೆ. ಇದೇ ವಿಷಯವನ್ನಿಟ್ಟುಕೊಂಡು ಆ ಗ್ಯಾಂಗ್ ಯೂಟ್ಯೂಬ್ ಚಾನಲ್ನಲ್ಲಿ ಗುರೂಜಿ ಬಗ್ಗೆ ಸಾಲು ಸಾಲು ಎಪಿಸೋಡ್ಗಳನ್ನ ಮಾಡಿದ್ರಂತೆ.
ದುಡ್ಡಿಗೆ ಬೇಡಿಕೆ ಕೂಡ ಇಟ್ಟಿದ್ರಂತೆ. ಆದ್ರೆ ಯಾವಾಗ ತಮ್ಮ ಬಗ್ಗೆ ವಿಡಿಯೋಗಳು ಹರಿದಾಡೋಕೆ ಶುರುವಾಯ್ತೋ ಗುರೂಜಿ ಸ್ಟೇ ಆರ್ಡರ್ ತಂದಿದ್ರು. ಆಗ ಆ ಗ್ಯಾಂಗ್ ಬೇರೆ ಹೆರುಗಳಲ್ಲಿ ಚಾನಲ್ ಮಾಡಿಕೊಂಡು ಮತ್ತೆ ಸುದ್ದಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ರು. ನಿರಂತರವಾದ ಬ್ಲ್ಯಾಕ್ಮೇಲ್ ಅನ್ನ ತಡೆದುಕೊಂಡಿದ್ದ ಆನಂದ್ ಗುರೂಜಿ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ಕೂತುಬಿಟ್ಟರು. ಎಲುಬಿಲ್ಲದ ನಾಲಗೆ ಏನ್ ಬೇಕಾದ್ರೂ ಮಾತನ್ನಾಡಿಸುತ್ತೆ ಅನ್ನೋದಕ್ಕೆ ಈಕೆಯ ಈ ಮಾತುಗಳೇ ಸಾಕ್ಷಿ. ಪತ್ರಕರ್ತೆ ಅಂತ ಮುಖವಾಡ ಹಾಕಿಕೊಂಡು ಮಾಡಬಾರದ ಕೆಲಸ ಮಾಡಿ ಈಗ ಪತ್ರಕರ್ತರ ಮೇಲೆಯೇ ಆರೋಪ ಮಾಡುತ್ತಿರುವ ಈಕೆಗೆ ಆ ದೇವರು ಒಳ್ಳೆಯ ಬುದ್ಧಿ ಕರುಣಿಸಲಿ.. ಹಾಗೇ ಈ ಕೇಸ್ನಲ್ಲಿ ಯಾರದ್ದು ತಪ್ಪಿದೆ ಅನ್ನೋದು ತನಿಖೆಯಿಂದ ಹೊರಗೆ ಬರಲಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.