ರೇಣುಕಾಸ್ವಾಮಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು..ಹಲ್ಲೆ ಬಳಿಕ ಕ್ಷಮಾಪಣೆ ವಿಡಿಯೋ ಮಾಡಲು ಪ್ಲ್ಯಾನ್‌ !

ಸಾವಿನ ವಿಚಾರ ಪೋನ್ ಮೂಲಕ ದರ್ಶನ್ ಗೆ ತಿಳಿಸಿದ್ದ ಆರೋಪಿಗಳು
ಪೊಲೀಸರ ತನಿಖೆ ವೇಳೆ ದರ್ಶನ್ ಗ್ಯಾಂಗ್ ಅಪಾಲಜಿ ಪ್ಲ್ಯಾನ್ ಬಯಲು 
ಆರೋಪಿಗಳ ಮೊಬೈಲ್ ಪರಿಶೀಲನೆ ರಿಟ್ರೀವ್ ಗೆ ಕಳಿಸಿದ ಪೊಲೀಸರು

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಮಹತ್ವದ ಬೆಳವಣಿಗೆಯಾಗಿದ್ದು, ತನಿಖೆ ವೇಳೆ ಮತ್ತೊಂದು ಕುತೂಹಲಕಾರಿ ವಿಚಾರ ಬಯಲಾಗಿದೆ. ಹಲ್ಲೆ ಬಳಿಕ ಅಪಾಲಜಿ ವಿಡಿಯೋ (Apology video) ಮಾಡಲು ಪ್ರಯತ್ನಿಸಲಾಗಿದೆಯಂತೆ. ರೇಣುಕಾಸ್ವಾಮಿ ಕೈಯಲ್ಲಿ ಕ್ಷಮಾಪಣೆ ಕೇಳಿಸಲು ಪ್ರಯತ್ನಿಸಲಾಗಿದೆಯಂತೆ. ಕ್ಷಮೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಪ್ಲ್ಯಾನ್ ಮಾಡಿದ್ದರಂತೆ. ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ(Attack) ಮಾಡಿದ್ದ ಗ್ಯಾಂಗ್. ಹಲ್ಲೆಯಿಂದ ಮೃತ ರೇಣುಕಾಸ್ವಾಮಿ ನಿತ್ರಾಣನಾಗಿ ಬಿದ್ದಿದೆ. ಅಸ್ವಸ್ಥನಾಗಿದ್ದ ರೇಣುಕಾಸ್ವಾಮಿಯನ್ನು ಇಬ್ಬರು ಮೇಲೆತ್ತಿ ಕೂರಿಸಿದ್ರು, ಎದುರುಗಡೆ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಮತ್ತೊಬ್ಬ ಆರೋಪಿ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳುವಂತೆ ಒತ್ತಾಯ ಮಾಡಲಾಗಿದೆಯಂತೆ. ಅಶ್ಲೀಲ ಮೆಸೇಜ್ , ಪೋಟೊ ಕಳಿಸಲ್ಲ ಎಂದು ಹೇಳುವಂತೆ ಒತ್ತಾಯ, ಅಷ್ಟೊತ್ತಿಗಾಗಲೇ ನಿಲ್ಲಲು, ಕೂರಲು ಆಗದೇ ರೇಣುಕಾಸ್ವಾಮಿ ನಿತ್ರಾಣಗೊಂಡಿದ್ದ. ದರ್ಶನ್(Darshan) ಗ್ಯಾಂಗ್ ಹಲ್ಲೆಗೆ ರೇಣುಕಾಸ್ವಾಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಾಳೆ ಹೇಳಿಸೋಣ ಬಿಡ್ರೋ ಅಂತೇಳಿ ಸುಮ್ಮನಾಗಿದ್ದ ದರ್ಶನ್. ಅಸ್ವಸ್ಥನಾಗಿದ್ದ ರೇಣುಕಾಸ್ವಾಮಿಯನ್ನ ಸೆಕ್ಯುರಿಟಿ ರೂಂಗೆ ಹಾಕಿದ್ದರು. ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಪ್ರಾಣಪಕ್ಷಿ ಹಾರಿ ಹೋಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕನ್ನಡಿಗರ ಜೀವನಾಡಿ KRS ಜಲಾಶಯ ಭರ್ತಿ: ಡಿಕೆಶಿ ಭೇಟಿ.. ಕಾವೇರಿ ಆರತಿಗೆ ಹೊಸ ಯೋಜನೆ

Related Video