Asianet Suvarna News Asianet Suvarna News

510 ದಿನಗೂಲಿ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಕಿಟ್‌ಗಳನ್ನು ವಿತರಿಸಲಾಗಿದೆ. ಜನರು ಕ್ಯೂನಲ್ಲಿ ನಿಂತು ಕಿಟ್ ಪಡೆದಿದ್ದಾರೆ.

ಬೆಂಗಳೂರು(ಏ.21): ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಕಿಟ್‌ಗಳನ್ನು ವಿತರಿಸಲಾಗಿದೆ. ಜನರು ಕ್ಯೂನಲ್ಲಿ ನಿಂತು ಕಿಟ್ ಪಡೆದಿದ್ದಾರೆ.

ಬೆಂಗಳೂರಿನ ಯಲಹಂಕದ ಬಳಿಯ ಎಲ್‌ವಿಎಎಸ್ ನಗರದಲ್ಲಿ ಸತ್ಸಂಗ ಫೌಂಡೇಷನ್ ಹಾಗೂ ಆವಾಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ 510 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಬಿಸಿ ಶುರು

ಅಗತ್ಯವಿರುವ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಹಾರದ ಕಿಟ್‌ಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿ ನಿಯಮಗಳನ್ನು ಪಾಲಿಸಿ, ಕ್ಯೂನಲ್ಲಿ ನಿಲ್ಲಿಸಿ ಜನರಿಗೆ ಕಿಟ್ ವಿತರಿಸಲಾಯ್ತು.