Asianet Suvarna News Asianet Suvarna News

ಕಲಬುರಗಿ: ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, ಸೇತುವೆ ಕುಸಿದು, ರಸ್ತೆ ಮುಳುಗಡೆ

ಕಲಬುರಗಿಯಲ್ಲಿ ಅಬ್ಬರಿಸಿದ ಮಳೆರಾಯ| ಜನಜೀವನ ಸಂಪೂರ್ಣ ಅಸ್ತವ್ಯಸ್ತ|ಮಳೆ ನೀರಿನಲ್ಲಿ ಜೆ.ಆರ್.ನಗರ  ಜಲಾವೃತ|ಮಳೆ ನೀರಿನಿಂದ ಕೆರೆಗಳಂತಾದ ಹೊಲ, ಗದ್ದೆಗಳು|

ಕಲಬುರಗಿ(ಜೂ.28): ಮಹಾಮಾರಿ ಕೊರೋನಾ ವೈರಸ್‌ ಹಾವಳಿ ಮಧ್ಯೆ ವರುಣ ಅಬ್ಬರಿಸಿದ್ದಾನೆ. ಹೌದು, ನಿನ್ನೆ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಲ್ಲಿ ಜೆ.ಆರ್.ನಗರ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಬೆಂಗಳೂರಲ್ಲಿ ಹೊಸ ಕೋವಿಡ್‌ ಕೇಂದ್ರಗಳ ಸ್ಥಾಪನೆ; ಎಲ್ಲೆಲ್ಲಿ? ಇಲ್ಲಿದೆ ನೋಡಿ.!

ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಸೇತುವೆ ಕುಸಿದು, ರಸ್ತೆ ಮುಳುಗಡೆಯಾಗಿದೆ. ಇದರಿಂದ ಜನರು ಬಹಳಷ್ಟು ತೊಂದರೆಗಳನ್ನ ಅನುಭವಿಸಿದ್ದಾರೆ. ಮಳೆ ನೀರಿನಿಂದ ಹೊಲ, ಗದ್ದೆಗಳು ಕೆರೆಗಳಂತಾಗಿವೆ. ಇನ್ನು ಮನೆಯಲ್ಲಿದ್ದ ದವಸ, ಧಾನ್ಯ ನೀರು ಪಾಲಾಗಿದೆ. 
 

Video Top Stories