Asianet Suvarna News Asianet Suvarna News

ಓಲೈಕೆಗೆ ಮುಂದಾದ ಸರ್ಕಾರ: ಬೆಳಗಾವಿಯಲ್ಲಿ 15 ಅಡಿ ಎತ್ತರದ ಬಸವೇಶ್ವರರ ಕಂಚಿನ ಪ್ರತಿಮೆಗೆ ಸಿದ್ಧತೆ

ಬೆಳಗಾವಿಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗೆ ಸರ್ಕಾರ ಮುಂದಾಗಿದ್ದು, ಚುನಾವಣೆ ಹೊಸ್ತಿಲಲ್ಲಿ  ಓಲೈಕೆ ಪಾಲಿಟಿಕ್ಸ್‌ ನಡೆಸುತ್ತಿದೆ. ಮೊನ್ನೆ ಶಿವಾಜಿ ಪ್ರತಿಮೆ ...ಈಗ ಬಸವೇಶ್ವರರ ಪ್ರತಿಮೆ   ಪ್ರತಿಷ್ಠಾಪನೆಗೆ  ಸರ್ಕಾರ ಮುಂದಾಗಿದೆ. 
 

ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದರಿಂದ ಕನ್ನಡ ಪರ ಸಂಘಗಳು ಕಿಡಿ ಕಾರಿದ್ದು, ಮರಾಠಿಗರ ಓಲೈಕೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಹೀಗಾಗಿ ಬೆಳಗಾವಿಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗೆ ಸರ್ಕಾರ ಮುಂದಾಗಿದ್ದು, ಚುನಾವಣೆ ಹೊಸ್ತಿಲಲ್ಲಿ  ಓಲೈಕೆ ಪಾಲಿಟಿಕ್ಸ್‌ ನಡೆಸುತ್ತಿದೆ. ಮೊನ್ನೆ ಶಿವಾಜಿ ಪ್ರತಿಮೆ ...ಈಗ ಬಸವೇಶ್ವರರ ಪ್ರತಿಮೆ   ಪ್ರತಿಷ್ಠಾಪನೆಗೆ  ಸರ್ಕಾರ ಮುಂದಾಗಿದೆ. 30 ಲಕ್ಷ ವೆಚ್ಚದಲ್ಲಿ 15 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರರ  ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ.