'ಪ್ರಗತಿ ಪ್ರತಿಮೆ' ಅನಾವರಣ: ನಮೋ ಕಂಡಂತೆ ಕೆಂಪೇಗೌಡರ ಊರು
ನಿನ್ನೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವಾಗಿದ್ದು, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಒಂದು ಅವಿಸ್ಮರಣೀಯ ದಿನವಾಗಿದೆ.
ಪ್ರಧಾನಿ ನರೇಂದ್ರ ಮೋದಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿದ್ದಾರೆ. ಜೊತೆಗೆ ಖುದ್ದಾಗಿ ಅವರೇ ಕರ್ನಾಟಕ ಮಾಡಿರೋ ಸಾಧನೆಗಳ ಪಟ್ಟಿಯನ್ನು ಜಗತ್ತಿನ ಮುಂದೆ ಒಂದೊಂದಾಗಿ ಇಟ್ಟಿದ್ದಾರೆ. ವಂದೇ ಭಾರತ ರೈಲಿಗೆ ಅವರು ಚಾಲನೆ ನೀಡಿದ್ದು, ಕರ್ನಾಟಕದ ವೈಶಿಷ್ಟತೆಯನ್ನು ಗುಣಗಾನ ಮಾಡಿದ್ದಾರೆ. ಪ್ರಧಾನಿಯವರು ಕನ್ನಡಿಗರ ಮುಂದೆ ಕನಕದಾಸ ಕೀರ್ತನೆಯನ್ನು ಹಾಡಿದ್ದು, ಕನ್ನಡದಲ್ಲೇ ಭಾಷಣ ಆರಂಭ ಮಾಡಿದ ಮೋದಿ ಭಾರತಕ್ಕೆ ಕರ್ನಾಟಕದ ಕೊಡುಗೆಗಳು ಏನು ಎಂದು ವಿವರಿಸಿದ್ದಾರೆ.