ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ನರಕ ದರ್ಶನ
ವೈದ್ಯರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ರೋಗಿಗಳು ಬಲಿಯಾಗಬೇಕು?|ಆಸ್ಪತ್ರೆಯತ್ತ ಯಾವ ವೈದ್ಯರು ಆಗಮಿಸುತ್ತಿಲ್ಲ| ಯಾರಿಗೂ ಕೂಡ ರೋಗಿಗಳ ಬಗ್ಗೆ ಕಾಳಜಿ ಇಲ್ಲ| ಅವ್ಯವಸ್ಥೆಯ ಆಗರವಾದ ಬೆಳಗಾವಿಯ ಬಿಮ್ಸ್ ಆಸ್ಪತ್ರೆ|
ಬೆಳಗಾವಿ(ಜು.26): ಕೊರೋನಾ ಸೋಂಕಿತ ವೃದ್ಧ ಒದ್ದಾಡಿ ಪ್ರಾಣಬಿಟ್ಟರೂ, ಯುವತಿ ನರಳಾಡಿ ಸಾವನ್ನಪ್ಪಿದ್ದರೂ ಮಾತ್ರ ನಗರದ ಬಿಮ್ಸ್ ಆಸ್ಪತ್ರೆಯ ವೈದ್ಯರು ಮಾತ್ರ ಇತ್ತ ಕಡೆ ಬರುತ್ತಿಲ್ಲ ಎಂದು ರೋಗಿಗಗಳ ಸಂಬಂಧಿಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ರೋಗಿಗಳು ಬಲಿಯಾಗಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ದಾವಣಗೆರೆ ಡಿಸಿ ಕಾಲಿಗೆ ಬಿದ್ದರೂ ಸಿಗಲಿಲ್ಲ ಚಿಕಿತ್ಸೆ; ವ್ಯಕ್ತಿ ಸಾವು
ಆಸ್ಪತ್ರೆಯತ್ತ ಯಾವ ವೈದ್ಯರು ಆಗಮಿಸುತ್ತಿಲ್ಲ, ಯಾರಿಗೂ ಕೂಡ ರೋಗಿಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಲಾಗಿದೆ.