
ಹುಬ್ಬಳ್ಳಿಯಲ್ಲೂ ಕೊರೋನಾ ವೈರಸ್ ಭೀತಿ: ವಾಣಿಜ್ಯ ನಗರಿಯ ವ್ಯಾಪಾರಕ್ಕೆ ಬಿತ್ತು ಹೊಡೆತ
ಕೊರೋನಾ ಸೋಂಕು| ಒಂದು ವಾರ ಕರ್ನಾಟಕ ಬಂದ್| ನಗರದ ಜನತೆ ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣ|
ಹುಬ್ಬಳ್ಳಿ(ಮಾ.14): ಕೊರೋನಾ ವೈರಸ್ ಹರಡದಿರಲು ಸಿಎಂ ಯಡಿಯೂರಪ್ಪ ಒಂದು ವಾರ ಕರ್ನಾಟಕ ಬಂದ್ ಆದೇಶಿದಿದ್ದಾರೆ. ಇದರಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಕೊರೋನಾ ಪರಿಣಾಮ ಬೀರಿದೆ. ನಗರದಲ್ಲಿ ವ್ಯಾಪಾರ ಮಾಡಲು ಜನರೇ ಇಲ್ಲದಂತಾಗಿದೆ.
Add Asianetnews Kannada as a Preferred Source

ನಗರದಲ್ಲಿ ಸಮರ್ಪಕವಾಗಿ ಮಾಸ್ಕ್ಗಳು ಸಿಗುತ್ತಿಲ್ಲ. ಇದರಿಂದ ಜನರು ಮತ್ತಷ್ಟು ಆತಂಕ್ಕೊಳಗಾಗಿದ್ದಾರೆ. ಅವಳಿ ನಗರದ ಜನತೆ ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹುಬ್ಬಳ್ಳಿಯಲ್ಲಿ ಇದೀಗ ನೋಡಿದ್ರೂ ಖಾಲಿ ಖಾಲಿಯಾಗಿದೆ.