
'ನಿಖಿಲ್ ಎಲ್ಲಿದಿಯಪ್ಪಾ' ಎಂದ ಅರ್ಚಕ: ಈ ಮಾತು ಕೇಳಿ ಒಂದು ಕ್ಷಣ ಹೌಹಾರಿದ ಕುಮಾರಸ್ವಾಮಿ
ಕಲಬುರಗಿಯ ಗಾಣಗಾಪುರ ದೇವಸ್ಥಾನದಲ್ಲೂ ನಿಖಿಲ್ ಎಲ್ಲಿದಿಯಪ್ಪಾ ಪ್ರಸ್ತಾಪವಾಗಿದೆ. ಅರ್ಚಕರು ನಿಖಿಲ್ ಎಲ್ಲಿದಿಯಪ್ಪಾ ಎನ್ನುತ್ತಿದ್ದಂತೆ ಕುಮಾರಸ್ವಾಮಿ ಗಾಬರಿಗೊಂಡ ಪ್ರಸಾಂಗ ನಡೆದಿದೆ.
ನಿಖಿಲ್ ಎಲ್ಲಿದಿಯಪ್ಪಾ…..ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿ ಮಾಡಿದ ಡೈಲಾಗ್, ಸೋಶಿಯಲ್ ಮೀಡಿಯಾದಲ್ಲಿ, ಕಾಲೇಜ್ ಫಂಕ್ಷನ್ಗಳಲ್ಲಿ, ಅಲ್ಲದೆ ಐಪಿಎಲ್ ಕ್ರಿಕೆಟ್ ನಲ್ಲೂ ಇದೇ ಡೈಲಾಗ್. ಅಷ್ಟೇ ಅಲ್ಲಾ ವಿದೇಶಗಳಲ್ಲೂ ನಿಖಿಲ್ ಎಲ್ಲಿದಿಯಪ್ಪಾ ಎಂಬ ಡೈಲಾಗ್ ಭಾರಿ ಸದ್ದು ಮಾಡಿದೆ. ಇದೀಗ ದೇವಸ್ಥಾನದಲ್ಲೂ ಖಿಲ್ ಎಲ್ಲಿದಿಯಪ್ಪಾ ಪ್ರಸ್ತಾಪವಾಗಿದ್ದು, ಇದರಿಂದ ಕುಮಾರಸ್ವಾಮಿ ಒಂದು ಕ್ಷಣ ದಂಗಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ