
ಬೆಳಗಾವಿ ಪಾಲಿಕೆಯಲ್ಲಿನ ಕನ್ನಡ ಧ್ವಜ ತೆಗೆಯಬೇಕಂತೆ: ಎಂಇಎಸ್ ಪುಂಡರ ಆಗ್ರಹ
ಕನ್ನಡ ರಾಜ್ಯೋತ್ಸವಕ್ಕೇ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಆದ್ರೆ ಈ ಮೊದಲೇ ಎಂಇಎಸ್ ಕಿರಿಕ್ ಮಾಡಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ.
ಬೆಳಗಾವಿ, (ಅ.25): ಕನ್ನಡ ರಾಜ್ಯೋತ್ಸವಕ್ಕೇ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇರುವಾಗಲೇ ಎಂಇಎಸ್ ಕಿರಿಕ್ ಮಾಡಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ಕನ್ನಡಕ್ಕಾಗಿ ನಾವು' ಅಭಿಯಾನ ಶುರು: ‘ಮಾತಾಡ್ ಮಾತಾಡ್ ಕನ್ನಡ’ ಘೋಷ!
ಬೆಳಗಾವಿಯಲ್ಲಿ ಇಂದು (ಅ.25) ಎಂಇಎಸ್ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ. ಸಂಭಾಜಿ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಧರಣಿ ನಡೆಸಿದ್ದಾರೆ..