ಮಂಗಳೂರು ಸ್ಫೋಟ ಪ್ರಕರಣ: ಅಲೋಕ್‌ ಕುಮಾರ್‌ಗೆ ಐಆರ್​ಸಿ ಬೆದರಿಕೆ

ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಸಧ್ಯದಲ್ಲಿಯೇ ಅನುಭವಿಸಲಿದ್ದೀರಿ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ಗೆ ಬೆದರಿಕೆ ಹಾಕಲಾಗಿದೆ.
 

Share this Video
  • FB
  • Linkdin
  • Whatsapp

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ವಿಚಾರವಾಗಿ ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ (IRC) ಸಂಘಟನೆಯು, ಕಾನೂನು ಸುವ್ಯವಸ್ಥೆ ADGP ಅಲೋಕ್‌ ಕುಮಾರ್‌ಗೆ ಎಚ್ಚರಿಕೆ ನೀಡಿದೆ. 'ನಿಮ್ಮ ಸಂತೋಷ ಕ್ಷಣಿಕವಾದದ್ದು, ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಸದ್ಯದಲ್ಲಿಯೇ ಅನುಭವಿಸಲಿದ್ದೀರಿ ಎಂದು ಬೆದರಿಕೆ ಹಾಕಲಾಗಿದೆ. ರಾಜ್ಯದಲ್ಲಿ ಗುಂಪುಹತ್ಯೆ, ದಬ್ಬಾಳಿಕೆಯ ಕಾನೂನುಗಳು, ಶಾಸನಗಳು, ಧರ್ಮದಲ್ಲಿ ಹಸ್ತಕ್ಷೇಪಕ್ಕೆ ಪ್ರತಿಯಾಗಿ ದಾಳಿ ಬಾಂಬ್‌ ಸ್ಫೋಟದ ಹೊಣೆ ಹೊತ್ತುಕೊಂಡ IRC, ಡಾರ್ಕ್‌ ವೆಬ್‌'ನಲ್ಲಿ ಸ್ಫೋಟದ ರೂವಾರಿಗಳು ತಾವೇ ಎಂದು ಹೇಳಿದ್ದು, ಕೇಂದ್ರ ತನಿಖಾ ಸಂಸ್ಥೆಗಳಿಂದ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Law for women: ಹೆಣ್ಮಕ್ಕಳಿಗೆ ಇದು ಗೊತ್ತಾದರೆ ಸೇಫ್, ಹಿಂಸೆಯಿಂದ ಸಿಗುತ್ತೆ ರಕ್ಷಣೆ

Related Video