
Mandya : ಮೇಲುಕೋಟೆ ಕೊಳದ ನೀರು ಕಲುಷಿತ, ಭಕ್ತರಲ್ಲಿ ಆತಂಕ
ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಅಭಿಷೇಕಕ್ಕೆ ಬಳಸುವ ತಂಗಿ ಕೊಳದ ನೀರು ಕಲುಷಿತಗೊಂಡಿದೆ. ಯಾವತ್ತೂ ಶುದ್ಧವಾಗಿ, ತಿಳಿಯಾಗಿರುತ್ತಿದ್ದ ನೀರು ಕಂದು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಇದು ಭಕ್ತ ಸಮೂಹದಲ್ಲಿ ಆತಂಕ ಮೂಡಿಸಿದೆ.
ಮಂಡ್ಯ (ನ. 10): ಮೇಲುಕೋಟೆ ಚೆಲುವನಾರಾಯಣ (Melukote Cheluvanarayana Swamy) ಸ್ವಾಮಿ ಅಭಿಷೇಕಕ್ಕೆ ಬಳಸುವ ತಂಗಿ ಕೊಳದ ನೀರು ಕಲುಷಿತಗೊಂಡಿದೆ. ಯಾವತ್ತೂ ಶುದ್ಧವಾಗಿ, ತಿಳಿಯಾಗಿರುತ್ತಿದ್ದ ನೀರು ಕಂದು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಇದು ಭಕ್ತ ಸಮೂಹದಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ ತಮಿಳು ಚಿತ್ರದ ಚಿತ್ರೀಕರಣ ಇಲ್ಲಿ ನಡೆದಿದೆ. ಚಿತ್ರತಂಡ ರಾಸಾಯನಿಕ ಮಿಶ್ರಿತ ಬಣ್ಣ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Add Asianetnews Kannada as a Preferred Source
