ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. 

Share this Video
  • FB
  • Linkdin
  • Whatsapp

ಮಡಿಕೇರಿ (ಮಾ. 11): ಸಾಮಾನ್ಯವಾಗಿ ಅಂದರು ಕಣ್ಣಿಗೆ ಕಪ್ಪು ಕನ್ನಡಕ ಹಾಕಿರುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲ್ಲ.ಆದರೆ ಇಲ್ಲಿ ವಿದ್ಯಾರ್ಥಿಯೊಬ್ಬ ಅಂದರಿಗಾಗಿ ಕನ್ನಡಕವೊಂದನ್ನು ಕಂಡು ಹಿಡಿದಿದ್ದಾನೆ.ಈ ಕನ್ನಡಕ ಹಾಕಿಕೊಂಡರೆ ಎದುರಿಗೆ ಏನೇ ಇದ್ದರು ಅಂದರಿಗೆ ಸೂಚನೆ ನೀಡುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. ಈ ಕನ್ನಡಕದ ವಿಶೇಷತೆ ಏನು ಅಂತ ನೋಡೋದಾದರೆ, ಇದನ್ನು ಹಾಕಿ ನಡೆಯುತ್ತಿದ್ದರೆ ಮುಂದೆ ಏನೇ ಇದ್ದರೂ ಒಂದು ಮೀಟರ್ ದೂರದಲ್ಲಿಯೇ ವಿಶಲ್ ಹಾಕುತ್ತೆ ಅಂದರೆ ಬೀಪ್ ಶಬ್ದ ಬರುತ್ತದೆ. ಇದರಿಂದ ಮುಂದೆ ಏನೋ ಅಡೆತಡೆ ಇದೆ ಎಂದು ಅಂದರಿಗೆ ಅರಿವಾಗುತ್ತದೆ. ಈ ಕನ್ನಡಕಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದೆ. ಜೊತೆಗೆ ಐದು ಗಂಟೆ ಬಿಸಿಲಿನಲ್ಲಿಟ್ಟರೆ ಸೂರ್ಯನ ಕಿರಣಗಳಿಂದಲೂ ಚಾರ್ಜ್ ಆಗುತ್ತದೆ. ಆದ್ದರಿಂದ ಅಂಧರು ಈ ಕನ್ನಡಕ ಹಾಕಿಕೊಂಡರೆ ಯಾವುದೇ ಅಪಾಯವಿಲ್ಲದೆ ಮುಂದೆ ಸಾಗಬಹುದಾಗಿದೆ.

Chikkamagaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

 ಇನ್ನೂ ಈ ಕನ್ನಡಕ ತಯಾರಿಸಲು ಬೇಕಾದ ಪರಿಕರಗಳನ್ನು ಆನ್​ಲೈನ್ ಮೂಲಕ ತರಿಸಲಾಗಿದೆ. ಒಂದು ಕನ್ನಡಕ ತಯಾರಿಕೆಗೆ ಸುಮಾರು ಒಂದು ಸಾವಿರ ರೂ ಖರ್ಚಾಗುತ್ತದೆ. ಮಗನ ಈ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದರೆ ನಮ್ಮ ಶಾಲೆಯಲ್ಲಿ ಇಂತಹ ಪ್ರತಿಭೆ ಇರೋದು ಗೊತ್ತಿರಲಿಲ್ಲ.ಈಗ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಿದ್ದಾರೆ ಶಿಕ್ಷಕ ವೃಂದದವರು. ಈ ಕನ್ನಡಕವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಈ ಯುವಕ ಮುಂದಾಗಿದ್ದಾನೆ. ಶಾಲೆ ಎಂದರೆ ಕೇವಲ ಓದು ಮಾತ್ರ ಅಲ್ಲ. ಅದರ ಜೊತೆಗೆ ಇಂತಹ ವಿಶೇಷ ಪ್ರತಿಭೆಗಳಿಗೆ ಶಾಲೆ ಒಂದು ಉತ್ತಮ ವೇದಿಕೆಯನ್ನು ನೀಡುತ್ತದೆ. ಅದಕ್ಕೆ ಈ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ ಎನ್ನುತ್ತಾರೆ ಶಿಕ್ಷಕರು.

Related Video