ಯುಗಾದಿಗೆ KSRTC ಬಸ್ ಡೌಟ್,ಮಾರ್ಚ್ 21ರಿಂದ ಸಾರಿಗೆ ನೌಕರರ ಮುಷ್ಕರ
ರಾಜ್ಯ ಸಾರಿಗೆ ನೌಕರರ ಸಂಘ ಯುಗಾದಿಗೆ ಶಾಕ್ ನೀಡಿದ್ದು, ಮಾರ್ಚ್ 21ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ
ರಾಜ್ಯ ಸಾರಿಗೆ ನೌಕರರ ಸಂಘ ಬಿಗ್ ಶಾಕ್ ಕೊಟ್ಟಿದ್ದು, ಮಾರ್ಚ್ 21ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ. ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದು, ಮೂಲವೇತನ ಶೇ.25 ರಷ್ಟು ಹೆಚ್ಚಿಸಬೇಕು, ಏಪ್ರಿಲ್ 2021 ರಂದು ವಜಾಗೊಂಡ ಸಿಬ್ಬಂದಿಯನ್ನು ಮರುನೇಮಕ ಮಾಡಬೇಕು, ಸಿಬ್ಬಂದಿ ಮೇಲೆ ದಾಖಲಾಗಿರುವ ಕೇಸ್ಗಳನ್ನ ರದ್ದು ಮಾಡಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ತೊಂದರೆ ಯಾಗುವ ಸಾಧ್ಯತೆ ಇದೆ.